alex Certify ಕಾರು ಚಾಲಕನ ಪ್ರಾಣ ಉಳಿಯಲು ಕಾರಣವಾಯ್ತು ಪ್ರಕೃತಿ ಕರೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ಚಾಲಕನ ಪ್ರಾಣ ಉಳಿಯಲು ಕಾರಣವಾಯ್ತು ಪ್ರಕೃತಿ ಕರೆ…!

ಚಲಿಸುತ್ತಿದ್ದ ಲಾರಿಯಿಂದ ಬಿದ್ದ ಬಂಡೆಯೊಂದು ಕಾರನ್ನು ಜಖಂಗೊಳಿಸಿದ ವಿಡಿಯೋ ವೈರಲ್ ಆಗಿದೆ.

ವಿಶೇಷವೆಂದರೆ ಈ ವಿಡಿಯೋಗೆ ನೆಟ್ಟಿಗರು ಬಗೆಬಗೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಏಕೆಂದರೆ, ರಸ್ತೆ ಬದಿ ನಿಂತ ಕಾರು ಜಖಂಗೊಳ್ಳುವ ಕೆಲ ಹೊತ್ತಿನ ಮುಂಚೆ ಕಾರಿನ ಮಾಲೀಕ ಪ್ರಕೃತಿ ಕರೆಗೆ ಓಗೊಟ್ಟು ರಸ್ತೆ ಬದಿಯಲ್ಲಿ ನಿಂತಿದ್ದರು.

ವೇಗವಾಗಿ ಚಲಿಸಿದ ಲಾರಿಯಿಂದ ಏಕಾಏಕಿ ದೊಡ್ಡ ಕಲ್ಲೊಂದು ಉರುಳಿ ಮೇಲೆ ಬಿದ್ದಿದ್ದರಿಂದ ಕಾರಿಗೆ ತೀವ್ರ ಸ್ವರೂಪದ ಹಾನಿಯಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ರಸ್ತೆ ಬದಿ ನಿಂತು ಕಾರಿಗೆ ಸುಖಾಸುಮ್ಮನೆ ಹಾನಿಯಾಯಿತು ಹೀಗಾಗಿ ದುರದೃಷ್ಟ ಹಾಗೂ ಆಕಸ್ಮಿಕವಾಗಿ ಕಾರಿನಿಂದ ಹೊರಗೆ ಉಳಿದ ಮಾಲೀಕ ಅಪಾಯದಿಂದ ಪಾರಾದ ಅದೃಷ್ಟಶಾಲಿ ಎಂಬ ಬಗ್ಗೆ ನೆಟ್ಟಿಗರು ಚರ್ಚೆ ನಡೆಸಿದ್ದಾರೆ.

ಕೆಲವರು ಕಾರು ಚಾಲಕ ಅದೃಷ್ಟಶಾಲಿ ಎಂದರೆ ಮತ್ತೆ ಕೆಲವರು ಕಾರನ್ನು ನಿಲ್ಲಿಸದಿದ್ದರೆ ಅಪಘಾತವೇ ಸಂಭವಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...