ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಂದೆ ಆನಂದ್ ಸಿಂಗ್ ಇಹಲೋಕ ತ್ಯಜಿಸಿದ್ದಾರೆ. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸೋಮವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಏಮ್ಸ್ ಪ್ರಕಾರ, ಸಿಎಂ ಯೋಗಿಯ ತಂದೆ ಬೆಳಿಗ್ಗೆ 10.45 ಕ್ಕೆ ಕೊನೆಯುಸಿರೆಳೆದರು.
ಆನಂದ್ ಸಿಂಗ್ ಅಂತಿಮ ಸಂಸ್ಕಾರ ಉತ್ತರಾಖಂಡದಲ್ಲಿ ನಡೆಯಲಿದೆ. ದೆಹಲಿಯಿಂದ ಉತ್ತರಾಖಂಡಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಲಾಗ್ತಿದೆ. ಸಾವಿನ ಅಧಿಕೃತ ಮಾಹಿತಿಯನ್ನು ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವ್ನಿಶ್ ಕೆ. ಅವಸ್ತಿ ನೀಡಿದ್ದಾರೆ.
ಆನಂದ್ ಸಿಂಗ್ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದ ಅವರು, ಇದು ಕಠಿಣ ಅವಧಿ. ಸಿಎಂ ಯೋಗಿ ಆದಿತ್ಯನಾಥ್ ಸಿಂಗ್ ಜೊತೆ ನಾವಿದ್ದೇವೆ ಎಂದಿದ್ದಾರೆ.