ನವದೆಹಲಿ: ಲೋಕಪಾಲ ಸದಸ್ಯ ಜಸ್ಟಿಸ್ ಅಜಯ್ ಕುಮಾರ್ ತ್ರಿಪಾಠಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
62 ವರ್ಷದ ಅಜಯ್ ಕುಮಾರ್ ತ್ರಿಪಾಠಿ ಅವರಿಗೆ ಕೊರೋನಾ ಸೋಂಕು ತಗಲಿದ್ದು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪುತ್ರಿ ಮತ್ತು ಅಡುಗೆ ಕೆಲಸದವರಿಗೂ ಸೋಂಕು ತಗಲಿದ್ದು ಚೇತರಿಸಿಕೊಂಡಿದ್ದಾರೆ.
ಛತ್ತೀಸ್ ಗಡದ ಮಾಜಿ ಮುಖ್ಯ ನ್ಯಾಯಾಧೀಶರಾಗಿದ್ದ ತ್ರಿಪಾಠಿ ನ್ಯಾಯಮೂರ್ತಿ ಪಿ.ಸಿ ಘೋಷ್ ನೇತೃತ್ವದ
ಭ್ರಷ್ಟಾಚಾಚರ ನಿಯಂತ್ರಣ ಆಯೋಗ, ಭ್ರಷ್ಟಾಚಾರ ವಿರೋಧಿ ಒಂಬುಡ್ಸಮನ್ ಲೋಕಪಾಲ ನ್ಯಾಯಾಂಗ ಸದಸ್ಯರಲ್ಲಿ ಒಬ್ಬರಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದರೂ ಸ್ಥಿರವಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.