alex Certify BIG BREAKING NEWS: ಭಾಷಣದಲ್ಲಿ ದೇಶದ ಜನರಿಗೆ ಮಹತ್ವದ ಸಂದೇಶ ನೀಡಿದ ಪ್ರಧಾನಿ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING NEWS: ಭಾಷಣದಲ್ಲಿ ದೇಶದ ಜನರಿಗೆ ಮಹತ್ವದ ಸಂದೇಶ ನೀಡಿದ ಪ್ರಧಾನಿ ಮೋದಿ

ನವದೆಹಲಿ: ಕೊರೋನಾ ಸಂಕಷ್ಟದ ಹೊತ್ತಲ್ಲಿ ಪ್ರಧಾನಿ ಮೋದಿ ದೇಶದ ಜನರನ್ನುದ್ದೇಶಿಸಿ 5 ನೇ ಬಾರಿಗೆ ಭಾಷಣ ಮಾಡಿದ್ದಾರೆ.

ವಿಶ್ವವೇ ಒಂದು ಪರಿವಾರ ಎಂದು ಭಾರತೀಯರು ನಂಬಿದ್ದಾರೆ. ಕೊರೋನಾ ಸಂಕಷ್ಟದಿಂದಾಗಿ ವಿಶ್ವದ ಆರ್ಥಿಕತೆಯಲ್ಲಿ ಬದಲಾವಣೆಯಾಗುತ್ತಿದೆ. ಭಾರತೀಯ ಸಂಸ್ಕೃತಿ ಸಂಸ್ಕಾರ ಸ್ವಾವಲಂಬಿ ಭಾರತದ ಬಗ್ಗೆ ಹೇಳುತ್ತದೆ. ಸ್ವಾವಲಂಬಿ ಭಾರತದ ಬಗ್ಗೆ ನಾವೆಲ್ಲರೂ ಚಿಂತನೆ ನಡೆಸಬೇಕಾಗಿದೆ. ಭೂಮಿಯನ್ನು ಭಾರತೀಯರು ತಾಯಿ ಎಂದು ಹೇಳುತ್ತಾರೆ. ವಿಶ್ವವೇ ಒಂದು ಪರಿವಾರ ಎನ್ನುವುದಕ್ಕೆ ನಾವೇ ಉದಾಹರಣೆ ಎಂದು ತಿಳಿಸಿದ್ದಾರೆ.

ಭಾರತದ ಅಭಿಯಾನಗಳ ಪರಿಣಾಮ ಜಗತ್ತಿನ ಮೇಲೆ ಆಗುತ್ತಿದೆ. ಭಾರತದ ಔಷಧಿಗಳು ಹೊಸ ಆಶಯವನ್ನು ಮೂಡಿಸುತ್ತಿವೆ. ಜಗತ್ತಿಗೆ ಭಾರತದ ಮೇಲೆ ವಿಶ್ವಾಸ ಮೂಡುತ್ತದೆ ಎಂದು ತಿಳಿಸಿದ್ದಾರೆ.

ಭಾರತದ ಕ್ರಮಗಳ ಬಗ್ಗೆ ಭರವಸೆ ಮೂಡಿಸಿದ್ದು ಸ್ವಾವಲಂಬನೆಯ ಅರ್ಥ ಬದಲಾಗುತ್ತಿದೆ. 21ನೇ ಶತಮಾನ ಭಾರತದ ಶತಮಾನವಾಗಿದೆ. ಕೊರೋನಾದಿಂದ ವಿಶ್ವದಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸಿದಾಗ ನಮ್ಮೆಲ್ಲರ ಜವಾಬ್ದಾರಿ ವಿಶ್ವಕ್ಕೆ ನಾವು ಮಾದರಿಯಾಗಬೇಕಿದೆ. ಟಿಬಿ, ಅಪೌಷ್ಟಿಕತೆ, ಪೋಲಿಯೋ ಹೊಡೆದೋಡಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಇಡೀ ವಿಶ್ವದಲ್ಲಿ ಭಾರತವನ್ನು ಕೊಂಡಾಡುತ್ತಿದ್ದಾರೆ. ಅದೇ ರೀತಿ ಕೊರೋನಾ ವಿರುದ್ಧದ ಹೋರಾಟದಲ್ಲಿ ವಿಶ್ವಾಸದಲ್ಲಿ ಮುನ್ನುಗ್ಗುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಮೋದಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...