alex Certify ವರ್ಷಕ್ಕೊಮ್ಮೆ ತೆರೆಯುತ್ತೆ ದೇಗುಲದ ಬಾಗಿಲು; ಮರಳಲ್ಲಿ ಮೂಡುತ್ತೆ ವಿಶೇಷ ಚಿಹ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಷಕ್ಕೊಮ್ಮೆ ತೆರೆಯುತ್ತೆ ದೇಗುಲದ ಬಾಗಿಲು; ಮರಳಲ್ಲಿ ಮೂಡುತ್ತೆ ವಿಶೇಷ ಚಿಹ್ನೆ

ಛತ್ತಿಸಗಢದ ಬಸ್ತಾರ್‌ ಜಿಲ್ಲೆಯ ಅಲೋರ್ ಹಳ್ಳಿಯ ಬೆಟ್ಟದ ಮೇಲೆ ಒಂದು ದೇವಸ್ಥಾನವಿದೆ. ಇಲ್ಲಿರುವ ಲಿಂಗವನ್ನು ದೇವಿಯ ಸ್ವರೂಪ ಎಂದು ಜನರು ನಂಬುತ್ತಾರೆ. ಎಲ್ಲ ಕಡೆ ಲಿಂಗವನ್ನು ಈಶ್ವರ ಎಂದು ಪೂಜಿಸಿದರೆ ಇಲ್ಲಿ ಶಿವ ಮತ್ತು ದೇವಿ ಶಕ್ತಿ ಎರಡನ್ನೂ ಆರಾಧಿಸಲಾಗುತ್ತದೆ.

ಈ ದೇವಸ್ಥಾನ ವರ್ಷಕ್ಕೆ ಒಂದೇ ಬಾರಿ ತೆರೆಯುತ್ತದೆ. ಆ ಒಂದು ದಿನದ ಪೂಜೆಯ ನಂತರ ದೇವಸ್ಥಾನದ ಬಾಗಿಲನ್ನು ಮುಚ್ಚಿಬಿಡುತ್ತಾರೆ. ಹೀಗೆ ಮುಚ್ಚಿದ ಬಾಗಿಲ ಮುಂದೆ ಮರಳನ್ನು ಹಾಕಲಾಗುತ್ತದೆ.

ಒಂದು ವರ್ಷ ಕಳೆದ ನಂತರ ಮತ್ತೆ ದೇವಸ್ಥಾನದ ಬಾಗಿಲನ್ನು ತೆರೆದಾಗ ಮರಳಿನ ಮೇಲೆ ಯಾವುದಾದರೂ ಚಿಹ್ನೆ ಮೂಡಿರುತ್ತದೆ. ಈ ಚಿಹ್ನೆ ಆ ವರ್ಷದ ಲಾಭ ಅಥವಾ ನಷ್ಟವನ್ನು ಸೂಚಿಸುತ್ತದೆ. ಒಮ್ಮೆ ಮರಳಿನ ಮೇಲೆ ಕಮಲದ ಚಿಹ್ನೆ ಕಾಣಿಸಿದರೆ ಧನ ಸಂಪತ್ತು ಹೆಚ್ಚುತ್ತದೆ ಎಂದು ಊರಿನ ಜನರು ಹೇಳುತ್ತಾರೆ. ದೇವಸ್ಥಾನದ ಒಳಗೆ ಹೋಗುವುದಾದರೆ ಮಂಡಿಯೂರಿಯೇ ಹೋಗಬೇಕು. ಒಳಗಡೆ ಹೋದ ಮೇಲೆ 25-30 ಜನ ನಿಲ್ಲುವಷ್ಟು ಸ್ಥಳಾವಕಾಶವಿದೆ. ಇಲ್ಲಿನ ದೇವಿಗೆ ಸೌತೆಕಾಯಿಯ ನೈವೇದ್ಯ ನಡೆಯುತ್ತದೆ. ಮಕ್ಕಳಾಗದ ದಂಪತಿಗಳು ಸೌತೆಕಾಯಿಯನ್ನು ನೈವೇದ್ಯ ಮಾಡಿಸಿ ಇಬ್ಬರೂ ಅದನ್ನು ತಿನ್ನುವುದು ಇಲ್ಲಿನ ವಾಡಿಕೆ. ಹೀಗೆ ಮಾಡುವುದರಿಂದ ದೇವಿ ಸಂತಾನ ಭಾಗ್ಯ ಕರುಣಿಸುತ್ತಾಳಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...