alex Certify ಕೊರೊನಾ ಬೆನ್ನಲ್ಲೇ ಹೊಸ ಸಂಕಷ್ಟ: ಕೇರಳದಲ್ಲಿ ಹಕ್ಕಿ ಜ್ವರದ ಹೈ ಅಲರ್ಟ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಬೆನ್ನಲ್ಲೇ ಹೊಸ ಸಂಕಷ್ಟ: ಕೇರಳದಲ್ಲಿ ಹಕ್ಕಿ ಜ್ವರದ ಹೈ ಅಲರ್ಟ್​…!

ಕೇರಳ ರಾಜ್ಯದ ಜನತೆಗೆ ಕೊರೊನಾ ವೈರಸ್​ ಆತಂಕದ ನಡುವೆ ಹಕ್ಕಿ ಜ್ವರದ ಸಂಕಷ್ಟ ಶುರುವಾಗಿದೆ. ಕೊಟ್ಟಾಯಂ ಹಾಗೂ ಆಲಪ್ಪುಳ ಜಿಲ್ಲೆಗಳ ಕೆಲ ಪ್ರದೇಶದಲ್ಲಿ ಹಕ್ಕಿ ಜ್ವರ ಪತ್ತೆಯಾದ ಬಳಿಕ ಕೇರಳ ರಾಜ್ಯ ಸರ್ಕಾರ  ರಾಜ್ಯ ವಿಪತ್ತು ಘೋಷಣೆ ಮಾಡಿದೆ.

ಅಲಪುಜ್ಜಾ ಜಿಲ್ಲೆಯ ನೆಡುಮುಂಡಿ, ಥಾಖಜೆ, ಪಾಲಿಪ್ಪಡ್​ ಹಾಗೂ ಕರುವಾಟ್ಟಾ ಪಂಚಾಯತ್​ಗಳ ವ್ಯಾಪ್ತಿಯಲ್ಲಿ ಬಾತುಕೋಳಿ ಸಾಕಣೆಯಿಂದ ಈ ವೈರಸ್​ ವರದಿಯಾಗಿದೆ.

ಕೊಟ್ಟಾಯಂ ಜಿಲ್ಲೆಯಲ್ಲಿರುವ ಜಮೀನಿನಲ್ಲಿ ಒಟ್ಟು 1700 ಬಾತುಕೋಳಿಗಳು ಸಾವನ್ನಪ್ಪಿವೆ. ಈ ಪಕ್ಷಿಗಳಲ್ಲಿ ವೈರಸ್​ ಕಂಡು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕುಟ್ಟನಾಡ್​ ಪ್ರದೇಶದ 34000 ಸೇರಿದಂತೆ ಸುಮಾರು 40000 ಪಕ್ಷಿಗಳನ್ನ ಸಾಮೂಹಿಕವಾಗಿ ಹತ್ಯೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...