alex Certify Big News: ದೊಣ್ಣೆ ಹಿಡಿದು ಹಲ್ಲೆ ನಡೆಸಿದ ಕುಸ್ತಿಪಟು ಸುಶೀಲ್‌ ಕುಮಾರ್‌ ವಿಡಿಯೋ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ದೊಣ್ಣೆ ಹಿಡಿದು ಹಲ್ಲೆ ನಡೆಸಿದ ಕುಸ್ತಿಪಟು ಸುಶೀಲ್‌ ಕುಮಾರ್‌ ವಿಡಿಯೋ ಬಹಿರಂಗ

ಕೊಲೆ ಆರೋಪವನ್ನ ಎದುರಿಸುತ್ತಿರುವ ಒಲಿಂಪಿಯನ್​ ಕುಸ್ತಿಪಟು ಸುಶೀಲ್​ ಕುಮಾರ್​ ಹಾಗೂ ಆತನ ಆಪ್ತರು ಮತ್ತೊಬ್ಬ ಕುಸ್ತಿಪಟುವಿಗೆ ಕೋಲಿನಿಂದ ಹಲ್ಲೆ ನಡೆಸುತ್ತಿರುವ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಹಲ್ಲೆಗೊಳಗಾದ ಕುಸ್ತಿಪಟು ನೆಲದಲ್ಲಿ ಒದ್ದಾಡಿದ್ದು ತೀವ್ರ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದಾನೆ.

ಕಳೆದ ವಾರವಷ್ಟೇ ಸುಶೀಲ್​ ಕುಮಾರ್​ ಕೊಲೆ ಆರೋಪದಡಿಯಲ್ಲಿ ಬಂಧನಕ್ಕೆ ಒಳಗಾಗಿದ್ದರು. ಛತ್ರಸಾಲಾ ಕ್ರೀಡಾಂಗಣದಲ್ಲಿ 23 ವರ್ಷದ ಸಾಗರ್​ ಧಂಕರ್​ ಎಂಬವರ ಮೇಲೆ ನಡೆದ ಹಲ್ಲೆ ಇದಾಗಿದ್ದು ಗಂಭೀರ ಗಾಯಗೊಂಡಿದ್ದ ಕುಸ್ತಿಪಟು ಸಾಗರ್​ ಸಾವನ್ನಪ್ಪಿದ್ದರು.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಸುಶೀಲ್​ ಕುಮಾರ್​ ಹಾಗೂ ಅವರ ಸ್ನೇಹಿತರು ಸಾಗರ್​ ಮತ್ತು ಅವರ ಇಬ್ಬರು ಸ್ನೇಹಿತರ ಮೇಲೆ ದೆಹಲಿಯ ಛತ್ರಸಾಲಾ ಕ್ರೀಡಾಂಗಣದಲ್ಲಿ ಹಲ್ಲೆ ನಡೆಸಿದ್ದರು. ಗಾಯಗೊಂಡಿದ್ದ ಮೂವರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾಗರ್​ ಅಸುನೀಗಿದ್ದರು.

ಸುಶೀಲ್​ ತನ್ನ ಸ್ನೇಹಿತ ಪ್ರಿನ್ಸ್ ಎಂಬಾತನ ಬಳಿ ಹಲ್ಲೆ ಮಾಡುತ್ತಿರುವ ದೃಶ್ಯವನ್ನ ವಿಡಿಯೋ ಮಾಡುವಂತೆ ಹೇಳಿದ್ದರಂತೆ. ಸುಶೀಲ್​ ಹಾಗೂ ಆತನ ಸ್ನೇಹಿತರು ದೊಣ್ಣೆಗಳಿಂದ ಮೂವರನ್ನ ಅತ್ಯಂತ ಕ್ರೂರವಾಗಿ ಹಿಂಸಿಸಿದ್ದಾರೆ. ಈ ವಿಡಿಯೋ ಮೂಲಕ ಕುಸ್ತಿಪಟು ಸಮುದಾಯದಲ್ಲಿ ಎಲ್ಲರಲ್ಲೂ ಭಯ ಹುಟ್ಟಿಸೋದು ಸುಶೀಲ್​ ಇರಾದೆಯಾಗಿತ್ತು ಎಂದು ಪೊಲೀಸರು ಕೋರ್ಟ್​ಗೆ ಕಳೆದ ವಾರ ಮಾಹಿತಿ ನೀಡಿದ್ದರು. ಈ ಪ್ರಕರಣ ಸಂಬಂಧ ದೆಹಲಿ ಪೊಲೀಸರು ಈಗಾಗಲೇ 8 ಮಂದಿಯನ್ನ ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...