ಹೈದ್ರಾಬಾದ್: ತಮ್ಮ ಕೈಯಿಂದ 20 ಸಾವಿರ ರೂ. ಪಾವತಿಸಿ ಲಾಕ್ಡೌನ್ ನಲ್ಲಿ ಸಿಲುಕಿದ್ದ ಹಿಮಾಚಲ ಪ್ರದೇಶದ ವ್ಯಕ್ತಿಗೆ ಪೊಲೀಸ್ ಇನ್ಸ್ಪೆಕ್ಟರ್ ಶಸ್ತ್ರ ಚಿಕಿತ್ಸೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.
ಸೈಬರಾಬಾದ್ ಪೊಲೀಸ್ ಕಮೀಷನರೇಟ್ ಅಡಿ ಬರುವ ಕುಕ್ಕಟಪಲ್ಲಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಿ.ಎಲ್. ಲಕ್ಷ್ಮೀನಾರಾಯಣ ರೆಡ್ಡಿ ಅವರ ಮಾನವೀಯ ಕಾರ್ಯಕ್ಕೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ ಠಾಕೂರ್, ರಾಜ್ಯಪಾಲ ಭಂಡಾರು ದತ್ತಾತ್ರೆಯ, ತೆಲಂಗಾಣ ಡಿಜಿಪಿ ಎಂ. ಮಹೇಂದ್ರ ರೆಡ್ಡಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಹಿಮಾಚಲದ ಹಮಿಪುರ್ ಜಿಲ್ಲೆಯ ಲಲಿತ್ ಕುಮಾರ ಲಾಕ್ಡೌನ್ ನಿಂದ ಕುಕ್ಕಟಪಲ್ಲಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಅವರಿಗೆ ತುರ್ತು ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇತ್ತು. ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ರೆಡ್ಡಿ ಅವರು ಲಲಿತ್ ಗೆ, ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.