alex Certify ಕೊರೋನಾ ತಂದ ಸಂಕಷ್ಟ: 2.25 ಲಕ್ಷ ಕೋಟಿ ರೂ.ಗೆ ಮೋದಿ ಸರ್ಕಾರಕ್ಕೆ ಬೇಡಿಕೆ ಇಟ್ಟ ಮುಖ್ಯಮಂತ್ರಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ತಂದ ಸಂಕಷ್ಟ: 2.25 ಲಕ್ಷ ಕೋಟಿ ರೂ.ಗೆ ಮೋದಿ ಸರ್ಕಾರಕ್ಕೆ ಬೇಡಿಕೆ ಇಟ್ಟ ಮುಖ್ಯಮಂತ್ರಿಗಳು

ನವದೆಹಲಿ: ಮಾರಕ ಕೊರೋನಾದಿಂದ ರಾಜ್ಯ ಸರ್ಕಾರಗಳಿಗೆ ಸಂಕಷ್ಟವಾಗಿರುವ ಹಿನ್ನೆಲೆಯಲ್ಲಿ ಕೇಂದ್ರದಿಂದ ಆರ್ಥಿಕ ನೆರವನ್ನು ಕೇಳಲಾಗಿದೆ.

ಮಹಾರಾಷ್ಟ್ರ ಸರ್ಕಾರ 50 ಸಾವಿರ ಕೋಟಿ ರೂಪಾಯಿ ನೆರವು ನೀಡುವಂತೆ ಮನವಿ ಮಾಡಿದೆ. ಛತ್ತಿಸ್ ಘಡ 30,000 ಕೋಟಿ ರೂಪಾಯಿ, ಕೇರಳ ಸರ್ಕಾರ 80,000 ಕೋಟಿ ರೂಪಾಯಿ, ರಾಜಸ್ಥಾನ 40,000 ಕೋಟಿ ರೂಪಾಯಿ, ಪಶ್ಚಿಮ ಬಂಗಾಳ 25,000 ಕೋಟಿ ರೂಪಾಯಿ, ತಮಿಳುನಾಡು 9,000 ಕೋಟಿ ರೂಪಾಯಿ ನೀಡಲು ಮನವಿ ಮಾಡಿವೆ.

ರಾಜ್ಯ ಸರ್ಕಾರದ ಬಳಿ ಹಣವೇ ಇಲ್ಲದಂತಾಗಿದೆ. ಆದ ನಷ್ಟಕ್ಕೆ ಕೇಂದ್ರ ಸರ್ಕಾರ ಪರಿಹಾರದ ಹಣ ನೀಡದಿದ್ದರೆ ಕಾನೂನಿನ ಆಯ್ಕೆಗಳ ಬಗ್ಗೆ ಪರಿಶೀಲನೆ ಮಾಡಬೇಕಾಗುತ್ತದೆ ಕೇಂದ್ರ ಸರ್ಕಾರಕ್ಕೆ ಜಾರ್ಖಂಡ್ ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರದಿಂದ ಬರಬೇಕಿರುವ 4186 ಕೋಟಿ ರೂಪಾಯಿ ನರೇಗಾ ಬಾಕಿ ಹಣ ನೀಡಲು ಛತ್ತೀಸ್ ಘಡ ಸರ್ಕಾರ ಮನವಿ ಮಾಡಿದೆ. ನ್ಯಾಷನಲ್ ಕೋರೋನಾ ನಿರ್ವಹಣ ನಿಧಿ ಸ್ಥಾಪನೆ ಮಾಡಬೇಕೆಂದು 1 ಲಕ್ಷ ಕೋಟಿ ರೂಪಾಯಿ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಒತ್ತಾಯಿಸಿದ್ದಾರೆ.

ಈ ನಿಧಿಯಿಂದ ಅಸಂಘಟಿತ ವಲಯದ ಕಾರ್ಮಿಕರು ರೈತರು ಎಂಎಸ್ಎಂಇ ಗಳಿಗೆ ಹಣ ನೀಡಲು ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ. 5 ರಾಜ್ಯಗಳ ಸರ್ಕಾರಗಳಿಂದ ಕೇಂದ್ರ ಸರ್ಕಾರಕ್ಕೆ 2.25 ಲಕ್ಷ ಕೋಟಿ ರೂಪಾಯಿ ನೆರವು ನೀಡುವಂತೆ ಕೋರಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...