alex Certify ಮನಕಲಕುತ್ತೆ ಪೊಲೀಸ್‌ ಅಧಿಕಾರಿ ಮಾಡಿರುವ ಈ ಕಾರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಕಲಕುತ್ತೆ ಪೊಲೀಸ್‌ ಅಧಿಕಾರಿ ಮಾಡಿರುವ ಈ ಕಾರ್ಯ

ಸಾಮಾನ್ಯವಾಗಿ ಪೊಲೀಸರು ಎಂದ ಕೂಡಲೇ ಅವರ ಗಂಭೀರತೆ ನೆನಪಿಗೆ ಬರುತ್ತೆ. ಆದರೆ ಕೇರಳದ ಪೊಲೀಸ್​ ಅಧಿಕಾರಿಯೊಬ್ಬರು ಕರ್ತವ್ಯನಿಷ್ಠೆಯ ಜೊತೆ ಜೊತೆಗೆ ಮಾನವೀಯ ಮೌಲ್ಯ ಮೆರೆಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆಗೆ ಕಾರಣವಾಗ್ತಿದ್ದಾರೆ.

ಪೋಷಕರಿಬ್ಬರೂ ಅಪಘಾತಕ್ಕೀಡಾದ ಬಳಿಕ ಒಂಟಿಯಾಗಿದ್ದ ಹಸುಗೂಸನ್ನ ಆಸ್ಪತ್ರೆಯ ಹೊರಗಡೆ ಎತ್ತಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

32 ಸೆಕೆಂಡ್​ಗಳ ಈ ವಿಡಿಯೋವನ್ನ ಕೇರಳ ಪೊಲೀಸ್​ ಇಲಾಖೆ ಫೇಸ್​ಬುಕ್​ನಲ್ಲಿ ಶೇರ್​ ಮಾಡಿದೆ. ಕಾರು ಅಪಘಾತದಲ್ಲಿ 7 ತಿಂಗಳ ಮಗು ಪ್ರಾಣಾಪಾಯದಿಂದ ಪಾರಾಗಿದ್ರೆ ಮಗುವಿನ ಪೋಷಕರು ಹಾಗೂ ಸಂಬಂಧಿಗಳು ಗಾಯಗೊಂಡಿದ್ದಾರೆ. ಮಗುವಿನ ಹಿರಿಯ ಸಹೋದರಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಕಯಂಕುಲಮ್​​ದಲ್ಲಿರುವ ತಮ್ಮ ಮನೆಗೆ ಕಾರಿನಲ್ಲಿ ವಾಪಸ್ಸಾಗುತ್ತಿದ್ದ ವೇಳೆ ಮಾರ್ಗಮಧ್ಯದಲ್ಲಿ ಕಾರು ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಈ ಅಪಘಾತದಲ್ಲಿ ಐವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

കായംകുളം രാമപുരത്ത് നടന്ന വാഹനാപകടത്തിൽ ഗുരുതര പരിക്കേറ്റ അമ്മയെയും ബന്ധുക്കളെയും അടിയന്തര ചികിത്സക്കായി മെഡിക്കൽ കോളേജിലേക്ക് മാറ്റിയപ്പോൾ അപകടത്തിൽ നിന്നും അത്ഭുതകരമായി രക്ഷപ്പെട്ട ഏഴു മാസം പ്രായമുള്ള കുഞ്ഞിൻ്റെ സംരക്ഷണം ബന്ധുക്കൾ എത്തുന്നത് വരെ ഏറ്റെടുത്ത് കുഞ്ഞിനെ പരിചരിക്കുന്ന കായംകുളം താലൂക്ക് ആശുപത്രി എയ്ഡ് പോസ്റ്റിലെ ഡ്യൂട്ടി ഹോം ഗാർഡ് കെ എസ് സുരേഷ്. #keralapolice #ramapuramaccident

Posted by Kerala Police on Tuesday, March 9, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...