alex Certify ಕ್ಷುಲ್ಲಕ ಕಾರಣಕ್ಕೆ ಅಣ್ಣನ ಮಗುವನ್ನೇ ಕೊಂದ ಸಹೋದರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಷುಲ್ಲಕ ಕಾರಣಕ್ಕೆ ಅಣ್ಣನ ಮಗುವನ್ನೇ ಕೊಂದ ಸಹೋದರಿ…!

ಹಾಸಿಗೆಯನ್ನ ಮಣ್ಣು ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ 5 ವರ್ಷದ ಅಳಿಯನನ್ನ ಆತನ ಅತ್ತೆಯೇ ಕೊಲೆ ಮಾಡಿದ ದಾರುಣ ಘಟನೆ ಉತ್ತರ ಪ್ರದೇಶ ಫರ್ರುಖಾಬಾದ್​ನಲ್ಲಿ ನಡೆದಿದೆ.

ಬಾಲಕನ ಮೃತದೇಹವನ್ನ ಮಹಿಳೆ ತನ್ನ ತಂದೆಯ ಸಹಾಯದಿಂದ ಕಾಡೊಂದರಲ್ಲಿ 7 ಅಡಿ ಹೊಂಡವನ್ನ ತೋಡಿ ಅದರಲ್ಲಿ ಹೂತಿದ್ದಳು ಎನ್ನಲಾಗಿದೆ. ಮೃತ ಬಾಲಕನ ತಾಯಿ ಮೂರು ವರ್ಷದ ಹಿಂದೆ ಸಾವನ್ನಪ್ಪಿದ್ರೆ ಆತನ ಅಜ್ಜಿ ಕೂಡ ಮೃತಪಟ್ಟಿದ್ದಳು ಎನ್ನಲಾಗಿದೆ. ಮೃತ ಬಾಲಕನನ್ನ ಯಶ್​ ಪ್ರತಾಪ್​ ಎಂದು ಗುರುತಿಸಲಾಗಿದೆ.

ನಕಲಿ ಡಿಡಿ ಕೊಟ್ಟು ವಂಚಿಸುತ್ತಿದ್ದ ಖತರ್ನಾಕ್ ದಂಪತಿ ಅರೆಸ್ಟ್

ಕಳೆದ 7 ತಿಂಗಳಿನಿಂದ ಯಶ್​ ಪ್ರತಾಪ್​ ತನ್ನ ಅತ್ತೆಯ ಜೊತೆ ನೆಲೆಸಿದ್ದ ಎನ್ನಲಾಗಿದೆ. ಈತನ ಮಾವ ದಾಖಲಿಸಿದ್ದ ನಾಪತ್ತೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಬಾಲಕನ ಕೊಲೆಗೆ ಕಾರಣವನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಯಶ್​ ತಂದೆ ಬ್ರಿಜೇಂದ್ರ ಸಿಂಗ್​​ ಬಳಿ ಆಕೆಯ ತಂಗಿಯೇ ಮಗ ಕಾಣೆಯಾಗಿದ್ದ ಬಗ್ಗೆ ಮಾಹಿತಿ ನೀಡಿದ್ದಳು ಎನ್ನಲಾಗಿದೆ. ಬಾಲಕ ಹಾಸಿಗೆಯನ್ನ ಒದ್ದೆ ಮಾಡಿದ ಕಾರಣಕ್ಕೆ ಆತನನ್ನ ಮನೆಯಿಂದ ಕೆಲ ಸಮಯದವರೆಗೆ ಹೊರಗೆ ಇಟ್ಟಿದ್ದೆ. ಆದರೆ ಬಾಗಿಲು ತೆಗೆದು ನೋಡೋವಷ್ಟರಲ್ಲಿ ಆತ ಕಾಣೆಯಾಗಿದ್ದ ಎಂದು ಸುಳ್ಳು ಕತೆ ಸೃಷ್ಟಿಸಿದ್ದಳು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...