alex Certify ಶಾಸಕ ಜಿಗ್ನೇಶ್​ ಮೇವಾನಿಯನ್ನ ಸದನದಿಂದ ಹೊರ ಕಳುಹಿಸಿದ ಸಭಾಪತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಸಕ ಜಿಗ್ನೇಶ್​ ಮೇವಾನಿಯನ್ನ ಸದನದಿಂದ ಹೊರ ಕಳುಹಿಸಿದ ಸಭಾಪತಿ..!

ಗುಜರಾತ್​​ನ ಪಕ್ಷೇತರ ಶಾಸಕ ಜಿಗ್ನೇಶ್​ ಮೇವಾನಿಯನ್ನ ಅಶಿಸ್ತು ತೋರಿದ ಆರೋಪದ ಹಿನ್ನೆಲೆಯಲ್ಲಿ ಸದನದಿಂದ ಅಮಾನತು ಮಾಡಲಾಗಿದೆ. ಸದನದಲ್ಲಿ ಸ್ಪೀಕರ್​ ಅನುಮತಿ ಕೇಳದೆಯೇ ದಲಿತ ವ್ಯಕ್ತಿಯ ಕೊಲೆಯ ವಿಚಾರವನ್ನ ಸದನದಲ್ಲಿ ಎತ್ತಿದ ಹಿನ್ನೆಲೆಯಲ್ಲಿ ಜಿಗ್ನೇಶ್​ರನ್ನ ಅಮಾನತು ಮಾಡಲಾಗಿದೆ.

ಸಭಾಪತಿ ರಾಜೇಂದ್ರ ತ್ರಿವೇದಿ ಆದೇಶದ ಹಿನ್ನೆಲೆ ಜಿಗ್ನೇಶ್​​ರನ್ನ ಸದನದಿಂದ ಹೊರ ಹಾಕಲಾಗಿದೆ. ಗುರುವಾರ ಕೂಡ ಇದೇ ಕಾರಣಕ್ಕೆ ಮೇವಾನಿಯವರನ್ನ ಸದನದಿಂದ ಹೊರಗೆ ಕಳುಹಿಸಲಾಗಿತ್ತು.

ಪ್ರಶ್ನಾವಳಿ ಅವಧಿ ಮುಗಿಯುತ್ತಿದ್ದಂತೆಯೇ ವದ್ಗಂ ಕ್ಷೇತ್ರದ ಶಾಸಕ ಮೇವಾನಿ ಕೂಡಲೇ ಎದ್ದು ನಿಂತು ಮಾರ್ಚ್​ 2ರಂದು ಕೊಲೆಯಾದ ದಲಿತ ವ್ಯಕ್ತಿಯ ಫೋಟೋವನ್ನ ಸದನಕ್ಕೆ ತೋರಿಸಿದ್ರು. ಪೋಟೋ ಇದ್ದ ಪೋಸ್ಟರ್​ನ ಮೇಲೆ ಅಪರಾಧಿಗಳನ್ನ ಯಾಕೆ ಬಂಧಿಸಿಲ್ಲ ಎಂದು ಬರೆಯಲಾಗಿತ್ತು.

ಈ ವೇಳೆ ಸಭಾಪತಿ ತ್ರಿವೇದಿ ಶಾಸಕ ಜಿಗ್ನೇಶ್​ರಿಗೆ ಯಾವುದೇ ವಿಚಾರವನ್ನ ಎತ್ತುವ ಮೊದಲು ಅನುಮತಿ ಕೇಳಿ ಎಂದು ಹೇಳಿದ್ದಾರೆ. ಸಭಾಪತಿಯ ಹೇಳಿಕೆಯ ಬಳಿಕವೂ ತಮ್ಮ ಸ್ಥಾನದಲ್ಲಿ ಕೂರದ ಕಾರಣ ಜಿಗ್ನೇಶ್​ರನ್ನ ಸದನದಿಂದ ಹೊರಕಳಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...