ನವದೆಹಲಿ: ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ಅತಿ ದೊಡ್ಡ ಕಾರ್ಯಾಚರಣೆಗೆ ಭಾರತ ಸರ್ಕಾರ ಸಿದ್ಧತೆ ಕೈಗೊಂಡಿದೆ.
ಭಾರತೀಯ ವಾಯುಸೇನೆಯ ವಿಮಾನಗಳು, ನೌಕಾಪಡೆ ಸನ್ನದ್ಧವಾಗಿದ್ದು ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ 93 ಲಕ್ಷ ಭಾರತೀಯರು ಸೇರಿ ವಿದೇಶದಲ್ಲಿರುವ ಭಾರತೀಯರನ್ನು ಕರೆತರಲಾಗುವುದು.
ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಈಗಾಗಲೇ ಸಿದ್ಧತೆ ನಡೆಸಿದೆ. ಮೇ 7 ರಿಂದ ಹಂತಹಂತವಾಗಿ ಭಾರತೀಯರನ್ನು ಏರ್ ಲಿಫ್ಟ್ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.
ವಿದೇಶದಲ್ಲಿರುವ ಸುಮಾರು 1.10 ಕೋಟಿ ಭಾರತೀಯರನ್ನು ಕರೆತರಲು ವಿದೇಶಾಂಗ ಇಲಾಖೆ ಕ್ರಮಕೈಗೊಂಡಿದ್ದು, ಭಾರತಕ್ಕೆ ಬರುವವರಿಂದ ರಾಯಭಾರ ಕಚೇರಿಗಳು ಮಾಹಿತಿ ಪಡೆದುಕೊಂಡಿವೆ. 6 ಗಲ್ಫ್ ರಾಷ್ಟ್ರಗಳಲ್ಲಿ 93 ಲಕ್ಷ ಭಾರತೀಯರ ಸ್ಥಿತಿ ಶೋಚನೀಯವಾಗಿದ್ದು ಮೊದಲಿಗೆ ಅವರನ್ನು ಕರೆತರಲು ಕಾರ್ಯಾಚರಣೆ ನಡೆಸಲಾಗುವುದು.
ಕೊರೋನಾ ಲಕ್ಷಣ ಇಲ್ಲದವರನ್ನು ಭಾರತಕ್ಕೆ ಕರೆತರಲು ತೀರ್ಮಾನ ಕೈಗೊಳ್ಳಲಾಗಿದೆ. ಭಾರತಕ್ಕೆ ವಾಪಸ್ ಆಗಲು ಎನ್ನಾರೈಗಳು ವಿಮಾನದ ಟಿಕೆಟ್ ಹಣ ಪಾವತಿಸಬೇಕಿದೆ.