alex Certify ʼಮಹಾʼ ಸರ್ಕಾರದ ವಿರುದ್ದ ನಟಿ ಕಂಗನಾರಿಂದ ಮತ್ತೊಂದು ಗುರುತರ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಹಾʼ ಸರ್ಕಾರದ ವಿರುದ್ದ ನಟಿ ಕಂಗನಾರಿಂದ ಮತ್ತೊಂದು ಗುರುತರ ಆರೋಪ

ಮಹಾರಾಷ್ಟ್ರ ಸರ್ಕಾರ ನನ್ನನ್ನ ಜೈಲಿನಲ್ಲಿ ಇರಿಸಲು ಯತ್ನಿಸುತ್ತಿದೆ ಅಂತಾ ಬಾಲಿವುಡ್​ ನಟಿ ಕಂಗನಾ ರಣಾವತ್​ ಆರೋಪಿಸಿದ್ದಾರೆ. ಟ್ವಿಟರ್​ ಪೋಸ್ಟ್​ಗಳ ಮೂಲಕ ಕೋಮು ಗಲಭೆ ಸೃಷ್ಟಿಸ್ತಾ ಇದ್ದಾರೆ ಎಂಬ ಆರೋಪದಡಿ ಕಂಗನಾ ಸಹೋದರಿಯರ ವಿರುದ್ಧ ಪ್ರಕರಣ ದಾಖಲಿಸುವಂತೆ ಮುಂಬೈ ಕೋರ್ಟ್ ಸೂಚನೆ ನೀಡಿತ್ತು.

ನಾನು ಸಾರ್ವಕರ್​, ಸುಭಾಷ್​ ಚಂದ್ರ ಬೋಸ್​ ಹಾಗೂ ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯನ್ನ ಆರಾಧಿಸುತ್ತೇನೆ. ಇದೀಗ ಮಹಾರಾಷ್ಟ್ರ ಸರ್ಕಾರ ನನ್ನನ್ನ ಜೈಲಿಗಟ್ಟಲು ಯತ್ನಿಸೋ ಮೂಲಕ ನನಗೆ ಇನ್ನಷ್ಟು ಬಲವನ್ನ ತುಂಬುತ್ತಿದೆ. ಹೀಗಾಗಿ ನಾನು ಜೈಲಿಗೆ ಹೋಗಲು ಕಾಯುತ್ತಿದ್ದೇನೆ. ಇದು ನನ್ನ ಜೀವನದ ಹೋರಾಟಕ್ಕೆ ಹೊಸ ಅರ್ಥವನ್ನ ನೀಡಲಿದೆ . ಜೈ ಹಿಂದ್​ ಅಂತಾ ಟ್ವೀಟಾಯಿಸಿದ್ದಾರೆ.

ಟ್ವಿಟರ್​ ಮೂಲಕ ಕಂಗನಾ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡ್ತಿದ್ದಾರೆ ಅಂತಾ ಆರೋಪಿಸಿ ವಕೀಲ ಅಜಿ ಕಾಷಿಫ್​ ಖಾನ್​ ದೇಶಮುಖ್​​ ಕೋರ್ಟ್​ ಮೆಟ್ಟಿಲೇರಿದ್ದರು.

ಇನ್ನು ಇದರ ಜೊತೆಯಲ್ಲಿ ಮತ್ತೊಂದು ಟ್ವೀಟ್​ ಮಾಡಿರೋ ಕಂಗನಾ ರಣಾವತ್​ ಬಾಲಿವುಡ್​ ನಟ ಆಮೀರ್​ ಖಾನ್​ರನ್ನ ಟ್ಯಾಗ್​ ಮಾಡಿದ್ದಾರೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕೋಟೆಯನ್ನ ಮುರಿದು ಹಾಕಿದಂತೆ ನನ್ನ ಮನೆಯನ್ನೂ ಧ್ವಂಸ ಮಾಡಿದ್ದಾರೆ, ಸಾರ್ವಕರ್​ನ್ನ ಜೈಲಿನಲ್ಲಿ ಇಟ್ಟಂತೆ ನನ್ನನ್ನೂ ಜೈಲಿನಲ್ಲಿ ಇಡೋಕೆ ಪ್ರಯತ್ನಿಸ್ತಾ ಇದ್ದಾರೆ ಅಂತಾ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...