alex Certify ರಾಮಮಂದಿರ ನಿರ್ಮಾಣಕ್ಕೆ ಮಾಜಿ ಶಾಸಕನಿಂದ 1 ಕೋಟಿ ರೂ. ದೇಣಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಮಮಂದಿರ ನಿರ್ಮಾಣಕ್ಕೆ ಮಾಜಿ ಶಾಸಕನಿಂದ 1 ಕೋಟಿ ರೂ. ದೇಣಿಗೆ

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ 5 ಲಕ್ಷ ರೂಪಾಯಿ ದೇಣಿಗೆ ಘೋಷಣೆ ಮಾಡಿರುವ ಬೆನ್ನಲ್ಲೇ ಉತ್ತರ ಪ್ರದೇಶದ ರಾಯ್​ ಬರೇಲಿಯ ಬೈಸ್ವಾರಾ ಜಿಲ್ಲೆಯ ತೇಜ್​ ಗಾಂವ್​ನ ಮಾಜಿ ಶಾಸಕ ಸುರೇಂದ್ರ ಬಹದ್ದೂರ್​ ಸಿಂಗ್​​​ 1 ಕೋಟಿ ರೂಪಾಯಿಗೂ ಅಧಿಕ ಕೊಡುಗೆ ನೀಡಿದ್ದಾರೆ.

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಶವ್ಯಾಪಿ ದೇಣಿಗೆ ಸಂಗ್ರಹ ಕಾರ್ಯಕ್ರಮ ಶುಕ್ರವಾರದಿಂದ ಪ್ರಾರಂಭವಾಗುತ್ತಿದ್ದಂತೆಯೇ ರಾಯ್​ ಬರೇಲಿಯ ಬೈಸ್ವಾರಾ ಜಿಲ್ಲೆಯ ತೇಜ್​ಗಾಂವ್​​ನ ಮಾಜಿ ಶಾಸಕ ಸುರೇಂದ್ರ ಬಹದ್ದೂರ್​ ಸಿಂಗ್​​ ವಿಶ್ವಹಿಂದೂ ಪರಿಷತ್​ ಉಪಾಧ್ಯಕ್ಷ ಹಾಗೂ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್​ ರಾಯ್​ಗೆ 1,11,11,111 ರೂಪಾಯಿಯ ಚೆಕ್​​ ನೀಡಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ 5 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಉಪಮುಖ್ಯಮಂತ್ರಿ ವೆಂಕಯ್ಯ ನಾಯ್ಡು ಕೂಡ 5 ಲಕ್ಷ ರೂಪಾಯಿಯನ್ನ ದೇಣಿಗೆ ರೂಪದಲ್ಲಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...