alex Certify ಶಾಕಿಂಗ್: ಶುಲ್ಕ ಕಟ್ಟಲು ಹಣವಿಲ್ಲದೆ ವಿದ್ಯಾರ್ಥಿನಿ ಸೂಸೈಡ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ಶುಲ್ಕ ಕಟ್ಟಲು ಹಣವಿಲ್ಲದೆ ವಿದ್ಯಾರ್ಥಿನಿ ಸೂಸೈಡ್​..!

ದೆಹಲಿ ಶ್ರೀರಾಮ ಮಹಿಳಾ ಕಾಲೇಜು ವಿದ್ಯಾರ್ಥಿನಿ ತೆಲಂಗಾಣದ ತನ್ನ ಊರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಡೆತ್​ ನೋಟ್​ನಲ್ಲಿ ಆರ್ಥಿಕ ಸಂಕಷ್ಟವೇ ನನ್ನ ಸಾವಿಗೆ ಕಾರಣ ಅಂತಾ ಬರೆದಿದ್ದಾಳೆ.

ಐಶ್ವರ್ಯ ರೆಡ್ಡಿ ಬಿಎಸ್​ಸಿ ವ್ಯಾಸಂಗ ಮಾಡುತ್ತಿದ್ದು ನವೆಂಬರ್​ 2ರಂದು ರಂಗಾರೆಡ್ಡಿ ಜಿಲ್ಲೆಯ ಶಾದ್​ನಗರದಲ್ಲಿರುವ ತನ್ನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾಳೆ. ಈಕೆಯ ಡೆತ್​ನೋಟ್​ ಪೊಲೀಸರ ಕೈಗೆ ಸಿಕ್ಕಿದ್ದು, ಇದರಲ್ಲಿ ಆಕೆ ತನಗೆ ಐಎಎಸ್​ ಆಫಿಸರ್​ ಆಗುವ ಕನಸಿದೆ. ಆದರೆ ನಾನು ನನ್ನ ಕುಟುಂಬಕ್ಕೆ ಹೊರೆಯಾಗಬಯಸಲ್ಲ ಎಂದು ಬರೆದಿದ್ದಾಳೆ.

ಮೆಕಾನಿಕ್​ ಶ್ರೀನಿವಾಸ್​ ರೆಡ್ಡಿ ಹಾಗೂ ಸುಮತಿ ಎಂಬವರ ಪುತ್ರಿಯಾಗಿದ್ದ ಐಶ್ವರ್ಯರನ್ನ ಹಣ ಕಟ್ಟಲು ಆಗದ ಕಾರಣ ಹಾಸ್ಟೆಲ್​ ಖಾಲಿ ಮಾಡುವಂತೆ ಹೇಳಲಾಗಿತ್ತು. ಕಡು ಬಡತನದ ಕುಟುಂಬದ ಐಶ್ವರ್ಯ ಟಾಪರ್​ ಆಗಿದ್ರೂ ಸಹ ಓದಲು ಆರ್ಥಿಕ ಬೆಂಬಲವಿಲ್ಲದ ಹಿನ್ನೆಲೆ ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...