alex Certify ಸ್ವರ್ಣ ಮಂದಿರಕ್ಕೆ 330 ಕ್ವಿಂಟಾಲ್ ಗೋಧಿ ನೀಡಿದ ಮುಸ್ಲಿಂ ಬಾಂಧವರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವರ್ಣ ಮಂದಿರಕ್ಕೆ 330 ಕ್ವಿಂಟಾಲ್ ಗೋಧಿ ನೀಡಿದ ಮುಸ್ಲಿಂ ಬಾಂಧವರು

ಕೋಮು ಸೌಹಾರ್ದತೆ ಸಾರುವ ನಿದರ್ಶನವೊಂದರಲ್ಲಿ, ಪಂಜಾಬ್‌ನ ಸಂಗ್ರೂರ್‌ ಜಿಲ್ಲೆಯ ಮುಸ್ಲಿಮರು ಅಮೃತಸರದ ಹರ್ಮಂದಿರ್‌ ಸಾಹಿಬ್ ಗುರುದ್ವಾರಾದ ಲಂಗರ್‌ಗೆ 330 ಕ್ವಿಂಟಾಲ್ ‌ನಷ್ಟು ಗೋಧಿಯನ್ನು ನೀಡಿದ್ದಾರೆ.

ಸಿಖ್‌-ಮುಸ್ಲಿಂ ಸಂಝಾ ಮಂಚ್‌ನ ಅಧ್ಯಕ್ಷ ನಿಸಾರ್‌ ಅಖ್ತರ್‌ ನೇತೃತ್ವದ ನಿಯೋಗವು ಸ್ವರ್ಣ ಮಂದಿರಕ್ಕೆ ಭೇಟಿ ನೀಡಿ ಗೋಧಿಯನ್ನು ಹಸ್ತಾಂತರಿಸಿದೆ. ಈ ನಿಯೋಗವು ಅಕಾಲ್ ತಕ್ತ್‌ಗೆ ಭೇಟಿ ನೀಡಿದ ಸಂದರ್ಭದ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮನದುಂಬಿ ಶ್ಲಾಘಿಸಿದ್ದಾರೆ.

ಇದೇ ರೀತಿಯ ಕೋಮು ಸೌಹಾರ್ದತೆ ಎಲ್ಲೆಡೆ ನೆಲೆಸಲಿ ಎಂದು ಸಾಕಷ್ಟು ಮಂದಿ ಟ್ವಿಟರ್‌ನಲ್ಲಿ ಹಾಕಲಾದ ಈ ಪೋಸ್ಟ್‌ಗೆ ಕಾಮೆಂಟ್ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...