alex Certify ಬಾಲಕಿಗೆ ಚಿಪ್ಸ್ ಆಮಿಷವೊಡ್ಡಿ ಸಾಮೂಹಿಕ ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕಿಗೆ ಚಿಪ್ಸ್ ಆಮಿಷವೊಡ್ಡಿ ಸಾಮೂಹಿಕ ಅತ್ಯಾಚಾರ

ಕೋಲ್ಕತ್ತಾದ ಜೋರಬಗನ್​ನಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಸಹಾಯದಿಂದ 9 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಬಾಲಕಿಗೆ ಚಿಪ್ಸ್ ಹಾಗೂ ಬಿರಿಯಾನಿಯ ಆಮಿಷವನ್ನೊಡ್ಡಿ ಅತ್ಯಾಚಾರವೆಸಗಿ ಬಳಿಕ ಆಕೆಯನ್ನ ಕೊಲೆ ಮಾಡಲಾಗಿದೆ.

ಅಮೃತಶಿಲೆ ಕತ್ತರಿಸುವ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಈ ಕೃತ್ಯವನ್ನ ಎಸಗಲು ಸೆಕ್ಯೂರಿಟಿ ಗಾರ್ಡ್​ ಸಹಾಯ ಮಾಡಿದ್ದಾನೆ ಎನ್ನಲಾಗಿದೆ.

ಈ ಕೃತ್ಯ ಎಸಗಿನ ವ್ಯಕ್ತಿಯನ್ನ ರಣವೀರ್​ ತಂತಿ ಅಲಿಯಾಸ್​ ರಘುವೀರ್​ ಎಂದು ಗುರುತಿಸಲಾಗಿದೆ. ಆಕೆಯನ್ನ ಕೊಲೆ ಮಾಡುವ ಮುನ್ನ 9 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ತಿಳಿದು ಬಂದಿದೆ. ರಾಮಕುಮಾರ್​ ಅಲಿಯಾಸ್​ ಲಂಬು ಎಂಬಾತ ಆಕೆಯನ್ನ ಕೊಲೆ ಮಾಡಲು ರಘುವೀರ್​​ಗೆ ಸಹಾಯ ಮಾಡಿದ್ದ ಎನ್ನಲಾಗಿದೆ.

ಇನ್ನು ಮೃತ ಬಾಲಕಿಗೆ ರಘುವೀರ್​ ಮೊದಲಿನಿಂದಲೂ ಪರಿಚಯಸ್ಥನಾಗಿದ್ದು ಆಕೆಗೆ ಬಿರಿಯಾನಿ ಹಾಗೂ ಚಿಪ್ಸ್ ಕೊಡುವ ಆಮಿಷವೊಡ್ಡಿದ್ದ ಎನ್ನಲಾಗಿದೆ. ಬಳಿಕ ಲಂಬು ಹಾಗೂ ರಘುವೀರ್ ಈಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಚಾಕುವಿನಿಂದ ಗಂಟಲು ಸೀಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಆರೋಪಿಗಳು ಮಕ್ಕಳ ಅಶ್ಲೀಲ ದೃಶ್ಯವನ್ನ ನೋಡುವ ಅಭ್ಯಾಸ ಹೊಂದಿದ್ದರು ಎನ್ನಲಾಗಿದೆ. ಆರೋಪಿಗಳ ಮೊಬೈಲ್​ನ್ನು ವಶಪಡಿಸಿಕೊಂಡಿದ್ದ ವೇಳೆ ಈ ಅಂಶ ಬೆಳಕಿಗೆ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...