alex Certify ಸಮಯಪ್ರಜ್ಞೆ ಮೆರೆದು ಮೂಕ ಪ್ರಾಣಿಗಳ ಜೀವ ಉಳಿಸಿದ ರೈಲು ಚಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮಯಪ್ರಜ್ಞೆ ಮೆರೆದು ಮೂಕ ಪ್ರಾಣಿಗಳ ಜೀವ ಉಳಿಸಿದ ರೈಲು ಚಾಲಕ

ಹಳಿ ದಾಟುತ್ತಿದ್ದ ಮೂರು ಆನೆಗಳ ಜೀವ ಉಳಿಸಲು ರೈಲ್ವೇ ಚಾಲಕ ರೈಲನ್ನ ನಿಲ್ಲಿಸುವ ಮೂಲಕ ಸಮಯಪ್ರಜ್ಞೆ ತೋರಿದ್ದಾರೆ. ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಕೇಂದ್ರ ರೈಲ್ವೇ ಸಚಿವ ಪಿಯೂಷ್​ ಗೋಯಲ್​​ ರೈಲು ಚಾಲಕನ ಸಮಯಪ್ರಜ್ಞೆಯನ್ನ ಪ್ರಶಂಸಿಸಿದ್ದಾರೆ.

ಪಶ್ಚಿಮ ಬಂಗಾಳದ ಶಿವೋಕ್​ – ಗುಲ್ಮಾ ವಿಭಾಗದಲ್ಲಿ ಒಂದು ಮರಿಯಾನೆ ಹಾಗೂ 2 ದೊಡ್ಡ ಆನೆಗಳು ಹಳಿ ದಾಟುತ್ತಿದ್ದವು. ಈ ವೇಳೆ ರೈಲು ಸಹ ಅದೇ ಮಾರ್ಗದಲ್ಲಿ ಚಲಿಸುತ್ತಿತ್ತು.

ಆದರೆ ಹಳಿಯಲ್ಲಿ ಮೂಕ ಪ್ರಾಣಿಗಳು ಇರೋದನ್ನ ಕಂಡ ಚಾಲಕ ಕೂಡಲೇ ರೈಲನ್ನ ಸ್ಟಾಪ್​ ಮಾಡುವ ಮೂಲಕ ಅವುಗಳ ಪ್ರಾಣ ಉಳಿಸಿದ್ದಾರೆ. ಆನೆಗಳು ಸುರಕ್ಷಿತವಾಗಿ ಹಳಿ ದಾಟಿದ ಬಳಿಕ ಚಾಲಕ ರೈಲನ್ನ ಚಲಾಯಿಸಿದ್ದಾರೆ. ಪಿಯೂಶ್​ ಹಂಚಿಕೊಂಡ ಈ ವಿಡಿಯೋಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.

— Piyush Goyal (@PiyushGoyal) November 11, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...