alex Certify ಈ ಸಮಾಧಿಗೆ ಅರ್ಪಿಸಲಾಗುತ್ತೆ ಸಿಗರೇಟಿನ ಕಾಣಿಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸಮಾಧಿಗೆ ಅರ್ಪಿಸಲಾಗುತ್ತೆ ಸಿಗರೇಟಿನ ಕಾಣಿಕೆ…!

ಅಹಮದಾಬಾದ್‌ ನ ಸಬರಮತಿ ನದಿ ದಂಡೆಯಲ್ಲಿರುವ ದಾಧಿಚಿ ರಿಶಿ ಆಶ್ರಮದ ಬಳಿ ನೂರಾರು ಭಕ್ತರು ವಿಶೇಷ ಕಾಣಿಕೆಗಳೊಂದಿಗೆ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ.

ಅಘೋರಿ ದಾದಾನ ಸಮಾಧಿ ಎನ್ನಲಾದ ಈ ಜಾಗಕ್ಕೆ ಪ್ರತಿ ಗುರುವಾರದಂದು ಭಕ್ತರು ಸಿಗರೇಟುಗಳು ಹಾಗೂ ಗುಲಾಬಿಗಳೊಂದಿಗೆ ಬರುತ್ತಾರೆ. ಕೊರೊನಾ ವೈರಸ್‌ ಸಾಂಕ್ರಮಿಕದ ನಡುವೆಯೂ ಈ ಸಂಪ್ರದಾಯ ಮುಂದುವರೆದಿದೆ.

ಅಹಮದಾಬಾದ್ ನಗರ ಸ್ಥಾಪನೆಯಾಗುವ ಮುಂಚಿನಿಂದಲೂ ಇರುವ ಈ ಆಶ್ರಮಕ್ಕೆ ಬರುವ ಯಾವುದೇ ಭಕ್ತನೂ ಸಹ ತನ್ನ ಸಾಮಾಜಿಕ ಸ್ಥಾನಮಾನಗಳು ಏನೇ ಇದ್ದರೂ ಅಗ್ಗದ ಸಿಗರೇಟುಗಳನ್ನೇ ದಾನ ಮಾಡಬೇಕಾಗುತ್ತದೆ. ಅಘೋರಿಗಳಿಗೆ ಹಿಂದೆ ಚರಸ್ ಹಾಗೂ ಗಾಂಜಾಗಳನ್ನು ಕಾಣಿಕೆಯನ್ನಾಗಿ ನೀಡಲಾಗುತ್ತಿತ್ತು. ಆದರೆ ಆ ವಸ್ತುಗಳನ್ನು ನಿಷೇಧ ಮಾಡಿದ ಬಳಿಕ ಇದೀಗ ಸಿಗರೇಟುಗಳನ್ನು ಕಾಣಿಕೆಯನ್ನಾಗಿ ಕೊಡಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...