ನವದೆಹಲಿ: ನಿರೀಕ್ಷೆಯಂತೆಯೇ ಜೂನ್ 1 ರ ಸೋಮವಾರ ಕೇರಳಕ್ಕೆ ಮುಂಗಾರು ಎಂಟ್ರಿ ಕೊಟ್ಟಿದೆ. ಈ ಬಾರಿ ಸರಾಸರಿಗಿಂತ ಅಧಿಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ದೇಶದ ರೈತರ ಜೀವನಾಡಿಯಾಗಿರುವ ನೈರುತ್ಯ ಮುಂಗಾರು ನಿರೀಕ್ಷಿಸಿದಂತೆಯೇ ಕೇರಳಕ್ಕೆ ಆಗಮಿಸಿದ್ದು ಒಂದೆರಡು ದಿನಗಳ ನಂತರ ರಾಜ್ಯಕ್ಕೆ ಪ್ರವೇಶಿಸಲಿದೆ. ಇದರೊಂದಿಗೆ ಈ ವರ್ಷದ ಮಳೆಗಾಲ ಆರಂಭವಾಗಿದೆ. ಕೇರಳದ ಕೋಜಿಕೋಡ್ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದ್ದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ನಿಸರ್ಗ ಚಂಡಮಾರುತ ಮುಂಗಾರು ಪ್ರವೇಶಕ್ಕೆ ಅನುಕೂಲಕರ ವಾತಾವರಣ ಕಲ್ಪಿಸಿರುವುದರಿಂದ ಎಲ್ಲೆಡೆ ಮುಂಗಾರು ವ್ಯಾಪಿಸಲಿದೆ ಎನ್ನಲಾಗಿದೆ.