alex Certify ಕೃಷಿಯನ್ನು ಗೌರವಿಸದಿದ್ದರೆ ಅಂತಹ ದೇಶಕ್ಕೆ ಭವಿಷ್ಯವಿಲ್ಲ: ಕಮಲ್‌ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೃಷಿಯನ್ನು ಗೌರವಿಸದಿದ್ದರೆ ಅಂತಹ ದೇಶಕ್ಕೆ ಭವಿಷ್ಯವಿಲ್ಲ: ಕಮಲ್‌ ಹೇಳಿಕೆ

ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರ ನಿಂತಿರುವ ಮಕ್ಕಳ್​ ನಿಧಿ ಮಾಯಂ ಪಕ್ಷದ ಸಂಸ್ಥಾಪಕ ಹಾಗೂ ನಟ ಕಮಲ್​ ಹಾಸನ್​ ಕೃಷಿಯನ್ನ ಬೆಂಬಲಿಸದ ಯಾವುದೇ ದೇಶ ಕುಸಿಯುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಕೃಷಿಯನ್ನ ಗೌರವಿಸದ ದೇಶವು ಅಧಃಪತನದ ಹಾದಿಯನ್ನ ಹಿಡಿಯುತ್ತೆ. ಈ ಪರಿಸ್ಥಿತಿ ನಮ್ಮ ದೇಶಕ್ಕೆ ಆಗದಿರಲಿ ಎಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.‌

ಇನ್ನು ಇದೇ ವೇಳೆ ರಜನಿಕಾಂತ್​ ಆರೋಗ್ಯದ ವಿಚಾರವಾಗಿಯೂ ಮಾತನಾಡಿದ ಕಮಲ್​ ಹಾಸನ್​, ಅವರ ಆರೋಗ್ಯ ಆದಷ್ಟು ಬೇಗ ಸುಧಾರಿಸಲಿ ಎಂದು ಹಾರೈಸಿದರು.

ಮುಂದಿನ ತಿಂಗಳು ರಾಜಕೀಯ ಪಕ್ಷವನ್ನ ಆರಂಭಿಸಲಿರುವ ಸೂಪರ್​ ಸ್ಟಾರ್​ ರಜಿನಿಕಾಂತ್​ ಜೊತೆ ಕೈ ಜೋಡಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕಮಲ್​ ಹಾಸನ್​, ನಾನು ಅವರು ನಲವತ್ತು ವರ್ಷಗಳಿಂದ ಒಟ್ಟಿಗೆ ಇದ್ದೇವೆ ಎಂದು ಚಿತ್ರರಂಗವನ್ನ ಮುಂದಿಟ್ಟುಕೊಂಡು ಉತ್ತರ ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...