ಕೊರೊನಾ ವೈರಸ್ ಅಬ್ಬರ ದೇಶದಲ್ಲಿ ಮುಂದುವರೆದಿದೆ. ಲಾಕ್ ಡೌನ್ ವಿಸ್ತರಣೆಯಾಗಿದ್ದು ಮೇ 17 ರವರೆಗೆ ಲಾಕ್ ಡೌನ್ ಮುಂದುವರೆಯಲಿದೆ. ನೋಯ್ಡಾದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಗೌತಮ್ ಬುದ್ಧ ನಗರವನ್ನು ಕೆಂಪು ವಲಯವನ್ನಾಗಿ ಘೋಷಣೆ ಮಾಡಲಾಗಿದ್ದು, ಇಲ್ಲಿನ ಜನರ ಸ್ಮಾರ್ಟ್ಫೋನ್ ಗೆ ಈ ಅಪ್ಲಿಕೇಷನ್ ಕಡ್ಡಾಯವಾಗಿದೆ.
ಕೇಂದ್ರ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಆರೋಗ್ಯ ಸೇತು ಅಪ್ಲಿಕೇಷನ್ ಪ್ರಾರಂಭಿಸಿದೆ. ಇದ್ರಲ್ಲಿ ಕೊರೊನಾ ಸೋಂಕಿತರ ಬಗ್ಗೆ ಮಾಹಿತಿ ಸಿಗಲಿದೆ. ಇದಲ್ಲದೆ ಕೊರೊನಾ ರೋಗಲಕ್ಷಣ ಸೇರಿದಂತೆ ನೀವಿರುವ ಸ್ಥಳ ಸುರಕ್ಷಿತವಾಗಿದೆಯಾ ಎಂಬ ಬಗ್ಗೆ ಮಾಹಿತಿ ನೀಡುತ್ತದೆ. ಹಾಗಾಗಿ ಅಲ್ಲಿನ ಪೊಲೀಸ್ ಆಯುಕ್ತರು ಸ್ಮಾರ್ಟ್ಫೋನ್ ಬಳಕೆದಾರರಿಗೆ ಆರೋಗ್ಯ ಸೇತು ಅಪ್ಲಿಕೇಷನ್ ಕಡ್ಡಾಯ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ವಿಮಾನ ಪ್ರಯಾಣ, ರೈಲ್ವೆ ಪ್ರಯಾಣಕ್ಕೂ ಈ ಅಪ್ಲಿಕೇಷನ್ ಕಡ್ಡಾಯವಾಗಲಿದೆ.