alex Certify BIG NEWS: ಮತ್ತೆ ಇಬ್ಬರು ಶಾಸಕರ ರಾಜೀನಾಮೆ – ಚುನಾವಣೆ ಹೊಸ್ತಿಲಲ್ಲೇ ಪತನದಂಚಿಗೆ ಬಂದು ನಿಂತ ಕಾಂಗ್ರೆಸ್ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮತ್ತೆ ಇಬ್ಬರು ಶಾಸಕರ ರಾಜೀನಾಮೆ – ಚುನಾವಣೆ ಹೊಸ್ತಿಲಲ್ಲೇ ಪತನದಂಚಿಗೆ ಬಂದು ನಿಂತ ಕಾಂಗ್ರೆಸ್ ಸರ್ಕಾರ

ಚುನಾವಣೆಗೆ ತಿಂಗಳುಗಳ ಮೊದಲು ಕಾಂಗ್ರೆಸ್​ ಸರ್ಕಾರವು ಪುದುಚೇರಿಯಲ್ಲಿ ಬಹುಮತ ಕಳೆದುಕೊಳ್ತಿದೆ. ಕಳೆದ ಎರಡು ದಿನಗಳಲ್ಲಿ ಇಬ್ಬರು ಶಾಸಕರು ಸೇರಿದಂತೆ ಒಟ್ಟು ನಾಲ್ವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ 30 ಶಾಸಕರ ಸ್ಥಾನದಲ್ಲಿ ಕಾಂಗ್ರೆಸ್​ 15 ಕಡೆ ಗೆಲುವನ್ನ ಕಂಡಿತ್ತು. ಡಿಎಂಕೆಯ ಇಬ್ಬರು ಸದಸ್ಯರ ಬೆಂಬಲ ಬಳಿಕ ಕಾಂಗ್ರೆಸ್​ ಬಹುಮತವನ್ನ ಪಡೆದಿದೆ.

ಆದರೆ ಇದೀಗ ನಾಲ್ವರು ಶಾಸಕರ ರಾಜೀನಾಮೆ ಬಳಿಕ ಕಾಂಗ್ರೆಸ್​​ನ ಸಂಖ್ಯಾಬಲ 11 ಆಗಿದ್ದು ಇದರಿಂದಾಗಿ ವಿ. ನಾರಾಯಣಸ್ವಾಮಿ ಸರ್ಕಾರಕ್ಕೆ ಬಹುಮತದ ಕೊರತೆ ಉಂಟಾಗಿದೆ.

ಚುನಾವಣಾ ಕಾರ್ಯತಂತ್ರವನ್ನ ರೂಪಿಸಲು ಸಂಸದ ಹಾಗೂ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಪುದುಚೇರಿಗೆ ಆಗಮಿಸೋಕೂ ಮುನ್ನವೇ ಪುದುಚೇರಿ ರಾಜಕೀಯದಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ.

ಕಳೆದ ಕೆಲ ವಾರಗಳಿಂದ ಕಾಂಗ್ರೆಸ್​ನಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಎ. ನಮಸಿವಯಂ ಹಾಗೂ ಇ. ಥಿಪೈಂಜನ್​​ ಜನವರಿ25ರಂದು ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಒಬ್ಬರು ಸೋಮವಾರ ಹಾಗೂ ಇನ್ನೊಬ್ಬ ಶಾಸಕ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...