ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನ ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ಸುದೀರ್ಘ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಕೇಂದ್ರ ಬಜೆಟ್ ನೆಮ್ಮದಿ ನೀಡಿದೆ.
ದೇಶದ ರೈತರು ಬೆಳೆದ ಬೆಲೆಗೆ ಬೆಂಬಲ ನೀಡಲು ಕೇಂದ್ರ ಸರ್ಕಾರ ಎಂದಿಗೂ ಬದ್ಧ ಎಂದು ಬಜೆಟ್ ಮಂಡನೆ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಧಾನ್ಯಗಳ ಖರೀದಿಗೆ 10,500 ಕೋಟಿ ರೂಪಾಯಿ ಮೀಸಲಿಡೋದಾಗಿ ಹೇಳಲಾಗಿದೆ. ಹೆಚ್ಚು ಬೆಲೆಗೆ ಕೇಂದ್ರ ಸರ್ಕಾರ ದೇಶದ ರೈತರ ಬೆಳೆ ಖರೀದಿ ಮಾಡಲಿದೆ.
ಬಿಗ್ ನ್ಯೂಸ್: ಕೊರೊನಾ ಲಸಿಕೆಗೆ 35 ಸಾವಿರ ಕೋಟಿ ರೂ. ಮೀಸಲು
ಕನಿಷ್ಟ ಬೆಂಬಲ ಬೆಲೆಯಿಂದ ದೇಶದ 43 ಕೋಟಿ ರೈತರಿಗೆ ಲಾಭವಾಗಲಿದೆ. ರೈತರು ಖರ್ಚು ಮಾಡಿದ ಒಂದೂವರೆ ಪಟ್ಟು ಹೆಚ್ಚು ಬೆಲೆಗೆ ಧಾನ್ಯಗಳನ್ನ ಖರೀದಿ ಮಾಡಲಾಗುವುದು. ಹಾಗೂ ಕೃಷಿಕರ ಆದಾಯವನ್ನ ಹೆಚ್ಚಿಸಲು ಸೂಕ್ತ ಕ್ರಮಗಳನ್ನ ಕೈಗೊಳ್ಳಲಾಗುವುದು. ರೈತರಿಂದ ಧಾನ್ಯಗಳನ್ನ ಖರೀದಿ ಮಾಡಲು ಹಿಂದೆಂದಿಗಿಂತ 40 ಪಟ್ಟು ಅಧಿಕ ಹಣವನ್ನ ಮೀಸಲಿಡಲಾಗಿದೆ.
ರೈತರ ಸಾಲಕ್ಕೆಂದೇ 16.5 ಲಕ್ಷ ಕೋಟಿ ರೂಪಾಯಿಯನ್ನ ಮೀಸಲಿಡಲಾಗಿದೆ. ಹಾಗೂ ದೇಶದಲ್ಲಿ ಎಪಿಎಂಸಿ ಮಾರುಕಟ್ಟೆಗಳ ಅಭಿವೃದ್ಧಿ ಮಾಡುವ ಬಗ್ಗೆ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.