alex Certify ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಕೇಳಿ ಅಪಹಾಸ್ಯಕ್ಕೀಡಾದ ರಾಹುಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಕೇಳಿ ಅಪಹಾಸ್ಯಕ್ಕೀಡಾದ ರಾಹುಲ್​

ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಬುಧವಾರ ಪುದುಚೇರಿಯ ಸೋಲಾಯ್​ ನಗರ ಪ್ರದೇಶದಲ್ಲಿ ಮಾತನಾಡುತ್ತಿರುವ ವೇಳೆ ಮೀನುಗಾರರಿಗೆ ಪ್ರತ್ಯೇಕ ಸಚಿವಾಲಯ ಬೇಕು ಎಂದು ಹೇಳುವ ಮೂಲಕ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಮೀನುಗಾರರನ್ನ ಸಮುದ್ರದ ರೈತರು ಎಂದು ಕರೆದ ರಾಹುಲ್​ ಗಾಂಧಿ ಸಮುದ್ರದ ರೈತರಿಗೆ ದೆಹಲಿಯಲ್ಲಿ ಏಕೆ ಸಚಿವಾಲಯ ಇಲ್ಲ ಎಂದು ಪ್ರಶ್ನೆ ಮಾಡಿದ್ದರು.

ಕೃಷಿ ಮಸೂದೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ರಾಹುಲ್​ ಗಾಂಧಿ, ರಾಷ್ಟ್ರದ ಬೆನ್ನೆಲುಬಾದ ರೈತರ ವಿರುದ್ಧ ಕೇಂದ್ರ ಸರ್ಕಾರ ಮೂರು ಮಸೂದೆಗಳನ್ನ ಅಂಗೀಕರಿಸಿದೆ. ಮೀನುಗಾರರ ಸಭೆಯಲ್ಲಿ ನಾನೇಕೆ ರೈತರ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ನಿಮಗೆ ಆಶ್ಚರ್ಯ ಎನಿಸಬಹುದು. ನಾನು ನಿಮ್ಮನ್ನ ಸಮುದ್ರದ ರೈತರು ಎಂದು ಭಾವಿಸಿದ್ದೇನೆ. ದೆಹಲಿಯಲ್ಲಿ ರೈತರಿಗಾಗಿ ಸಚಿವಾಲಯ ಇದೆ ಎಂದ ಮೇಲೆ ಸಮುದ್ರದ ರೈತರಿಗೇಕೆ ಪ್ರತ್ಯೇಕ ಸಚಿವಾಲಯ ಇರಬಾರದು ಎಂದು ಪ್ರಶ್ನೆ ಮಾಡಿದ್ದಾರೆ.

ರಾಹುಲ್​ ಗಾಂಧಿ ಈ ರೀತಿ ಹೇಳಿಕೆ ನೀಡುತ್ತಿದ್ದಂತೆಯೇ ಬಿಜೆಪಿ ನಾಯಕರು ಟಾಂಗ್​ ಕೊಡೋಕೆ ಆರಂಭಿಸಿದ್ದಾರೆ. ಟ್ವಿಟರ್​ನಲ್ಲಿ ರಾಹುಲ್​ ಗಾಂಧಿ ವಿರುದ್ಧ ಅಪಹಾಸ್ಯದ ಸುರಿಮಳೆಯೇ ಶುರುವಾಗಿದೆ.

ಅಂದಹಾಗೆ ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನುಗಾರಿಕಾ ಸಚಿವಾಲಯವನ್ನ ಪ್ರಧಾನಿ ಮೋದಿ ಮೇ 2019ರಲ್ಲೇ ಪ್ರಾರಂಭಿಸಿದ್ದಾರೆ ಹಾಗೂ ಪ್ರಸ್ತುತ ಕೇಂದ್ರ ಸಚಿವ ಗಿರಿರಾಜ್​ ಸಿಂಗ್​ ಇದರ ನೇತೃತ್ವ ವಹಿಸಿದ್ದಾರೆ.

— Shandilya Giriraj Singh (@girirajsinghbjp) February 17, 2021

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...