alex Certify ಆಪ್ತನ ದುಷ್ಕೃತ್ಯಕ್ಕೆ ನ್ಯೂಟನ್​ ನಿಯಮ ಉದಾಹರಣೆ ಕೊಟ್ಟು ಬಿಜೆಪಿ ಶಾಸಕನ ಸಮರ್ಥನೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಪ್ತನ ದುಷ್ಕೃತ್ಯಕ್ಕೆ ನ್ಯೂಟನ್​ ನಿಯಮ ಉದಾಹರಣೆ ಕೊಟ್ಟು ಬಿಜೆಪಿ ಶಾಸಕನ ಸಮರ್ಥನೆ..!

ಎಲ್ಲ ಕ್ರಿಯೆಗೂ ಸಮನಾದ ಪ್ರತಿಕ್ರಿಯೆ ಕೊಡಲೇಬೇಕಲ್ಲವೆ ಎಂದು ಹೇಳುವ ಮೂಲಕ ತಮ್ಮ ಸಹಾಯಕ ಮಾಡಿದ ಕೊಲೆಯನ್ನ ಬಿಜೆಪಿ ಶಾಸಕ ಸುರೇಂದ್ರ ಸಿಂಗ್​ ಸಮರ್ಥಿಸಿಕೊಂಡಿದ್ದಾರೆ.

ಶಾಸಕ ಸುರೇಂದ್ರ ಸಿಂಗ್​ ಆಪ್ತ ಧಿರೇಂದ್ರ ಸಿಂಗ್​​ ಜೈ ಪ್ರಕಾಶ್​ ಪಾಲ್​ ಎಂಬವರ ಮೇಲೆ ಫೈರಿಂಗ್​ ನಡೆಸಿದ ಪ್ರಕರಣ ಸಂಬಂಧ ಈ ರೀತಿಯ ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶ ದುರ್ಜಾಂಪುರ ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿಯ ದರ ಹಂಚಿಕೆ ಸಂಬಂಧ ಚರ್ಚೆ ನಡೆಸಲು ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಈ ವೇಳೆ ಶಾಸಕರ ಸಹಾಯಕ ಧಿರೇಂದ್ರ ಸಿಂಗ್​ ತನ್ನ ವೈರಿ ಜೈ ಪ್ರಕಾಶ್ ಎಂಬವರ ಮೇಲೆ ನಾಲ್ಕು ಸುತ್ತು ಫೈರಿಂಗ್​ ಮಾಡಿದ್ದಾರೆ.

ಇದನ್ನ ಆತ್ಮರಕ್ಷಣೆ ಎಂದು ಸಮರ್ಥಿಸಿಕೊಂಡ ಸುರೇಂದ್ರ ಸಿಂಗ್​, ಯಾರದ್ದೋ ಅಪ್ಪ, ತಾಯಿ ಅಥವಾ ಸಹೋದರರನ್ನ ಹೊಡೆದರೆ ಆ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನೀಡಲೇಬೇಕಾಗುತ್ತೆ ಅನ್ನೋದು ನನ್ನ ಅಭಿಪ್ರಾಯ ಅಂತಾ ಹೇಳಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿರೋ ಸಂತ್ರಸ್ತರ ಕುಟುಂಬ, ಬಿಜೆಪಿ ನಾಯಕರು ಹಾಗೂ ಉತ್ತರ ಪ್ರದೇಶ ಪೊಲೀಸರು ಆರೋಪಿಗೆ ಬೆಂಬಲ ನೀಡ್ತಿದ್ದಾರೆ ಅಂತಾ ಆರೋಪಿಸಿದ್ದಾರೆ.

ಈ ಹತ್ಯೆ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುತ್ತಿದ್ದಂತೆ, ಸರ್ಕಲ್ ಆಫೀಸರ್ ಮತ್ತು ಇತರ ಮೂವರು ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...