alex Certify ಕೊರೊನಾ ನಾಶ ಮಾಡಲು ಬಿಜೆಪಿ ನಾಯಕನಿಂದ ʼಶಂಖನಾದʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನಾಶ ಮಾಡಲು ಬಿಜೆಪಿ ನಾಯಕನಿಂದ ʼಶಂಖನಾದʼ

ಭಾರತವು ಕೊರೊನಾ ಎರಡನೆ ಅಲೆ ವಿರುದ್ಧ ಹೋರಾಡ್ತಿದೆ. ಸಂಪೂರ್ಣ ವಿಶ್ವ ಕೊರೊನಾ ಹೋಗಲಾಡಿಸಲು ಶಾಶ್ವತ ಪರಿಹಾರವನ್ನ ಹುಡುಕುತ್ತಿದೆ. ಈ ಎಲ್ಲದರ ನಡುವೆ ಮೀರತ್​ನಲ್ಲಿ ಬಿಜೆಪಿ ನಾಯಕ ಶಂಖನಾದ ಮೊಳಗಿಸುತ್ತಾ, ಹನುಮಾನ ಚಾಲಿಸಾ ಪಠಿಸುತ್ತಾ ಹವನದ ಹೊಗೆಯನ್ನ ಊರೆಲ್ಲ ಹರಡುವ ಮೂಲಕ ಕೊರೊನಾವನ್ನ ನಾಶಪಡಿಸುವ ಪ್ರಯತ್ನದಲ್ಲಿದ್ದಾರೆ.

ಮೀರತ್​ನ ಬಿಜೆಪಿ ನಾಯಕ ಗೋಪಾಲ್​ ಶರ್ಮಾ, ನಗರದ ವಿವಿಧ ಭಾಗಗಳಲ್ಲಿ ಸಂಚರಿಸುವ ಮೂಲಕ ಶಂಖನಾದ ಮೊಳಗಿಸುತ್ತಾ ಹವನದ ಹೊಗೆಯನ್ನ ಎಲ್ಲೆಡೆ ಪಸರಿಸಿದ್ದಾರೆ, ಈ ರೀತಿ ಮಾಡೋದ್ರಿಂದ ಜನರಿಗೆ ಕೊರೊನಾದಿಂದ ಗುಣಮುಖರಾಗೋದು ಸುಲಭವಾಗಲಿದೆ ಅನ್ನೋದು ಶರ್ಮಾ ನಂಬಿಕೆಯಂತೆ.

ತವರು ರಾಜ್ಯ ಗುಜರಾತ್ ಗೆ 1000 ಕೋಟಿ ರೂ. ಪರಿಹಾರ ಘೋಷಿಸಿದ ಮೋದಿ – ಶಿವಸೇನೆ, NCP ಚಾಟಿ

ಹವನ ಕುಂಡವನ್ನ ತಳ್ಳು ಗಾಡಿಯ ಮೇಲೆ ಹಾಕಿಕೊಂಡು ಶಂಖನಾದವನ್ನ ಮೊಳಗಿಸುತ್ತಾ ಗೋಪಾಲ್​ ಶರ್ಮಾ ಐವರು ಸಹಚರರೊಂದಿಗೆ ತೆರಳುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಗೋಪಾಲ್​ ಶರ್ಮಾ, ನಾವು ಹವನದ ಕುಂಡದಲ್ಲಿ ಬೆರಣಿ, ಹಸುವಿನ ತುಪ್ಪ, ಮಾವಿನ ಮರದ ಕೊಂಬೆ, ಕರ್ಪೂರ ಸೇರಿದಂತೆ ಕೆಲ ವಸ್ತುಗಳನ್ನ ಹಾಕಿದ್ದೇವೆ. ಇದರಿಂದ ವಾತಾವರಣ ಶುದ್ಧವಾಗಿ ಕೊರೊನಾ ವೈರಸ್​ ನಾಶವಾಗಲಿದೆ. ಅಲ್ಲದೇ ವಾತಾವರಣದಲ್ಲಿ ಆಮ್ಲಜನಕ ಪ್ರಮಾಣವೂ ಹೆಚ್ಚಲಿದೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...