alex Certify ಬಿಜೆಪಿಗೆ ಮತ್ತೊಂದು ಹಿನ್ನೆಡೆ: ಕೃಷಿ ಮಸೂದೆ ವಿರೋಧಿಸಿ ಎನ್​ಡಿಎ ಮೈತ್ರಿಕೂಟದಿಂದ ಆರ್​ಎಲ್​ಪಿ ಹೊರಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿಗೆ ಮತ್ತೊಂದು ಹಿನ್ನೆಡೆ: ಕೃಷಿ ಮಸೂದೆ ವಿರೋಧಿಸಿ ಎನ್​ಡಿಎ ಮೈತ್ರಿಕೂಟದಿಂದ ಆರ್​ಎಲ್​ಪಿ ಹೊರಕ್ಕೆ

ರೈತರ ಪ್ರತಿಭಟನೆಗೆ ಕಾರಣವಾಗಿರುವ ಕೃಷಿ ಮಸೂದೆಯನ್ನ ವಿರೋಧಿಸಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿ ಕೂಟದಿಂದ ರಾಷ್ಟ್ರೀಯ ಲೋಕ ತಾಂತ್ರಿಕ ಪಕ್ಷ ಹೊರಬಿದ್ದಿದೆ. ಈ ಬಗ್ಗೆ ಆರ್​ಎಲ್​ಪಿ ಸಂಸ್ಥಾಪಕ ಹಾಗೂ ನಾಗೌರ್ ಸಂಸದ ಹನುಮಾನ್ ಬೆನಿವಾಲ್ ಅಧಿಕೃತ ಮಾಹಿತಿ ನೀಡಿದ್ದಾರೆ.

ರೈತರ ವಿರುದ್ಧ ಇರುವ ಯಾರೊಂದಿಗೂ ನಾವು ನಿಲ್ಲೋದಿಲ್ಲ ಎಂದು ಸಂಸದ ಬೇನಿವಾಲ್​ ರಾಜಸ್ಥಾನದ ಅಲ್ವಾರ್​ ಜಿಲ್ಲೆಯ ಶಹಜಹಾನ್​ಪುರ – ಖೇಡಾ ಗಡಿಯಲ್ಲಿ ರೈತರನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.

2018ರಲ್ಲಿ ಬಿಜೆಪಿಯನ್ನ ತೊರೆದಿದ್ದ ಬೆನಿವಾಲ್​ ಬಳಿಕ ರಾಷ್ಟ್ರೀಯ ಲೋಕ ತಾಂತ್ರಿಕ ಪಕ್ಷವನ್ನ ರಾಜಸ್ಥಾನದಲ್ಲಿ ಪ್ರಾರಂಭಿಸಿದ್ದರು. 2019ರ ಸಾರ್ವತ್ರಿಕ ಚುನಾವಣೆಗೂ ಮುಂಚೆ ಬಿಜೆಪಿ ಜೊತೆ ಆರ್​ಎಲ್​ಪಿ ಕೈ ಜೋಡಿಸಿತ್ತು. ಆದರೆ ಕೃಷಿ ಕಾನೂನನ್ನ ಹಿಂಪಡೆಯದೇ ಇದ್ದರೆ ಬೆಂಬಲ ಹಿಂಪಡೆಯೋದಾಗಿ ವಾರದ ಹಿಂದೆಯೇ ಎನ್​ಡಿಎ ಮೈತ್ರಿಕೂಟಕ್ಕೆ ಎಚ್ಚರಿಕೆ ನೀಡಿತ್ತು. ಅದರಂತೆ ತನ್ನ ಬೆಂಬಲವನ್ನ ವಾಪಸ್​ ಪಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...