alex Certify ಕಣ್ಣೆದುರಲ್ಲೇ ನಡೆದ ಘಟನೆಯಿಂದ ಬೆಚ್ಚಿಬಿದ್ದ ಜನ: ಪತ್ನಿಯ ತಲೆ ಕತ್ತರಿಸಿದ ಪತಿರಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣೆದುರಲ್ಲೇ ನಡೆದ ಘಟನೆಯಿಂದ ಬೆಚ್ಚಿಬಿದ್ದ ಜನ: ಪತ್ನಿಯ ತಲೆ ಕತ್ತರಿಸಿದ ಪತಿರಾಯ

ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಪತ್ನಿಯ ತಲೆ ಕತ್ತರಿಸಿದ್ದಾನೆ. ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಿವ ಮಂದಿರ ಬಳಿ ಘಟನೆ ನಡೆದಿದೆ.

ಮೂರು ವರ್ಷಗಳಿಂದ ದಂಪತಿ ಬೇರೆಯಾಗಿದ್ದು ದಂಪತಿ ಕಲಹದ ವಿಚಾರ ಕೋರ್ಟ್ ನಲ್ಲಿತ್ತು. 48 ವರ್ಷದ ಅಲ್ಲೂ ಯಾದವ್ ಕೊಲೆ ಆರೋಪಿಯಾಗಿದ್ದಾನೆ. ಆತನ ಪತ್ನಿ ಚಾಂದಿನಿ ದೇವಿ ಮೃತ ಮಹಿಳೆ.

2013 ರಲ್ಲಿ ಮದುವೆಯಾಗಿದ್ದ ದಂಪತಿಗೆ ಮಗಳಿದ್ದಾಳೆ. ಜಾರ್ಖಂಡ್ ರಾಜ್ಯದ ಪಕೂರ್ ಜಿಲ್ಲೆಯ ನಿವಾಸಿಯಾಗಿರುವ ಚಾಂದನಿ ದೇವಿ ಗಂಡನೊಂದಿಗಿನ ಭಿನ್ನಾಭಿಪ್ರಾಯದಿಂದ ಪ್ರತ್ಯೇಕವಾಗಿ ವಾಸವಾಗಿದ್ದರು. ಗಂಡನಿಂದ ಜೀವನೋಪಾಯಕ್ಕಾಗಿ ಪರಿಹಾರ ಕೋರಿ ಕೋರ್ಟಿಗೆ ದೂರು ನೀಡಿದ್ದಳು.

ಕೇಸ್ ವಾಪಸ್ ಪಡೆಯುವಂತೆ ಬಲವಂತ ಮಾಡುತ್ತಿದ್ದ ಅಲ್ಲೂ ಯಾದವ್ ಶುಕ್ರವಾರ ಮಧ್ಯಾಹ್ನ ಪತ್ನಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ಆಕೆಯ ಮೇಲೆ ಹಲ್ಲೆ ನಡೆಸಿ ಹರಿತವಾದ ಆಯುಧದಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಮಹಿಳೆಯನ್ನು ಪಾರು ಮಾಡಲು ಅಲ್ಲಿದ್ದವರು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಘಟನೆಯ ನಂತರ ಆರೋಪಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...