alex Certify BIG NEWS: ಉತ್ಪಾದನೆ – ರಫ್ತಿಗೆ ಆದ್ಯತೆ ಎಂದು ಹೇಳಿದ ನಿರ್ಮಲಾ ಸೀತಾರಾಮನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉತ್ಪಾದನೆ – ರಫ್ತಿಗೆ ಆದ್ಯತೆ ಎಂದು ಹೇಳಿದ ನಿರ್ಮಲಾ ಸೀತಾರಾಮನ್

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸ್ವಾವಲಂಭಿ ಭಾರತದ ನಾಲ್ಕನೇ ಕಂತನ್ನು ಘೋಷಣೆ ಮಾಡ್ತಿದ್ದಾರೆ. ಸ್ವಾವಲಂಭಿ ಭಾರತಕ್ಕೆ ಇದು ನೆರವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಎಲ್ಲ ಕ್ಷೇತ್ರಗಳ ನೀತಿ ಸಡಿಲಗೊಳಿಸಿದ್ದು ಅಭಿವೃದ್ಧಿಗೆ, ಉದ್ಯೋಗ ಸೃಷ್ಟಿಗೆ ಕ್ರಮಕೈಗೊಂಡಿದ್ದೇವೆಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸಾಂಸ್ಥಿಕ ಸುಧಾರಣೆಗೆ ಇಂದು ಆಧ್ಯತೆ ನೀಡಲಾಗಿದೆ. ಈ ಮೂಲಕ ಹೂಡಿಕೆಗೆ ಉತ್ತೇಜನ ನೀಡುತ್ತೇವೆಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಹೂಡಿಕೆ ಹೆಚ್ಚಿಸಲು ಉನ್ನತ ಕಾರ್ಯದರ್ಶಿಗಳ ಸಮಿತಿ ರಚನೆ ಮಾಡುವುದಾಗಿ ಹೇಳಿದ್ದಾರೆ. ರಾಜ್ಯಗಳಲ್ಲಿ ಕೈಗಾರಿಕೆಗಳ ಹೂಡಿಕೆಗೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ದೇಶದಲ್ಲಿ 5 ಲಕ್ಷ ಹೆಕ್ಟೆರ್ ಕೈಗಾರಿಕಾ ಭೂಮಿಯಿದೆ. ದೇಶದಲ್ಲಿ 3376 ಕೈಗಾರಿಕಾ ಪಾರ್ಕ್ ಗಳಿವೆ. ಉತ್ಪಾದನೆ ಮತ್ತು ರಫ್ತಿಗೆ ಆದ್ಯತೆ ನೀಡಲಾಗುವುದು. ಕೈಗಾರಿಕಾ ಕ್ಲಸ್ಟರ್ ಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜಾಗತೀಕ ಸ್ಪರ್ಧೆಗೆ ದೇಶವನ್ನು ಸಜ್ಜುಗೊಳಿಸುವ ಅಶ್ಯಕತೆಯಿದೆ. ಇದಕ್ಕೆ ನಾವು ಸಿದ್ಧತೆ ನಡೆಸುತ್ತಿದ್ದೇವೆಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

8 ವಲಯಗಳಿಗೆ ವಿದೇಶಿ ಹೂಡಿಕೆಗೆ ಆದ್ಯತೆ ನೀಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕಲ್ಲಿದ್ದಲು, ಖನಿಜ ಸಂಪತ್ತು, ರಕ್ಷಣೆ, ವೈಮಾನಿಕ, ಧನ, ಬಾಹ್ಯಾಕಾಶ, ಅಣುಶಕ್ತಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...