alex Certify ಊಟದ ಹಣ ಕೇಳಿದ್ದಕ್ಕೆ ಕೋಮು ಗಲಭೆ ಮಾಡಿಸುವ ಬೆದರಿಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಊಟದ ಹಣ ಕೇಳಿದ್ದಕ್ಕೆ ಕೋಮು ಗಲಭೆ ಮಾಡಿಸುವ ಬೆದರಿಕೆ…!

ವಿಧಾನಸಭಾ ಚುನಾವಣೆಗೆ ಅಣಿಯಾಗುತ್ತಿರುವ ತಮಿಳುನಾಡಿನಲ್ಲಿ ನಡೆದ ಶಾಕಿಂಗ್ ಘಟನೆಯೊಂದರಲ್ಲಿ, ರಾಜಕೀಯ ಪಕ್ಷವೊಂದರ ಕಾರ್ಯಕರ್ತರಿಬ್ಬರು ತಾವು ತಿಂದ ಊಟಕ್ಕೆ ದುಡ್ಡು ಕೇಳಿದ ರೆಸ್ಟೋರೆಂಟ್‌ ಸಿಬ್ಬಂದಿಗೆ, ತಾವು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪಿಎಗಳಾಗಿದ್ದು, ಕೋಮು ಗಲಭೆ ಮಾಡಿಸುವುದಾಗಿ ಧಮಕಿ ಹಾಕಿದ್ದಾರೆ.

ಚೆನ್ನೈನ ಟ್ರಿಪ್ಲಿಕೇನ್ ಪ್ರದೇಶದಲ್ಲಿ ಇರುವ ರೆಸ್ಟೋರೆಂಟ್‌ಗೆ ಆಗಮಿಸಿದ ಪಾನಮತ್ತ ಕಾರ್ಯಕರ್ತರು ಆಹಾರಕ್ಕೆ ಆರ್ಡರ್‌ ಮಾಡಿದ್ದಾರೆ. ರೆಸ್ಟೋರೆಂಟ್‌ ಮಾಲೀಕ ದುಡ್ಡು ಕೇಳಿದಾಗ ಗಲಾಟೆ ಮಾಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗಲಾಟೆ ಮಾಡಿದ ಈ ಇಬ್ಬರ ವಿರುದ್ಧ ರೆಸ್ಟೋರೆಂಟ್ ಮಾಲೀಕರು ದೂರು ಕೊಟ್ಟಿದ್ದು ಪ್ರಕರಣ ದಾಖಲಿಸಲಾಗಿದೆ. ಇಬ್ಬರನ್ನೂ ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು, ಆ ವೇಳೆ ಅವರಿಬ್ಬರೂ ಪಾನಮತ್ತರಾಗಿದ್ದರು ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...