alex Certify ಕುಡಿದು ಮನೆಗೆ ಬಂದ ಮದ್ಯವ್ಯಸನಿಯಿಂದ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದು ಮನೆಗೆ ಬಂದ ಮದ್ಯವ್ಯಸನಿಯಿಂದ ಘೋರ ಕೃತ್ಯ

ರಾಯ್ಪುರ್: ಛತ್ತೀಸ್ಗಡದ ಜಂಜಗಿರ್ ಚಂಪಾ ಜಿಲ್ಲೆಯಲ್ಲಿ ಮದ್ಯ ಸೇವಿಸಿದ ವ್ಯಕ್ತಿ ದೊಣ್ಣೆಯಿಂದ ಹೊಡೆದು ತಾಯಿಯನ್ನೇ ಕೊಲೆ ಮಾಡಿದ್ದಾನೆ.

ಅಮೃತ್ ಲಾಲ್ ಗಡವಾಲ್ ಎಂಬಾತನೇ ಇಂತಹ ಕೃತ್ಯ ಎಸಗಿದ ಆರೋಪಿ. ಮದ್ಯವ್ಯಸನಿಯಾಗಿದ್ದ ಅಮೃತ್ ಲಾಲ್ ಸೋಮವಾರದಿಂದ ಮದ್ಯದ ಅಂಗಡಿ ಓಪನ್ ಆಗುತ್ತಿದ್ದಂತೆ ಕಂಠಪೂರ್ತಿ ಕುಡಿದು ಊರಿನ ಕಡೆ ಹೆಜ್ಜೆ ಹಾಕಿದ್ದಾನೆ.

ಗ್ರಾಮಕ್ಕೆ ಬಂದ ಆತ ಮದ್ಯದ ನಶೆಯಲ್ಲಿ ರಸ್ತೆಯಲ್ಲಿ ಓಡಾಡುವವರೊಂದಿಗೆ ಜಗಳವಾಡಿದ್ದಾನೆ. ಆತನ ಮನವೊಲಿಸಿದ ಗ್ರಾಮಸ್ಥರು ಮನೆಗೆ ಕಳುಹಿಸಿದ್ದಾರೆ. ಮನೆಗೆ ಬಂದ ಅಮೃತ್ ಲಾಲ್ ಗಲಾಟೆ ಮಾಡಿದ್ದು ಪತ್ನಿ ಮತ್ತು ತಾಯಿಯನ್ನು ದೊಣ್ಣೆಯಿಂದ ಥಳಿಸಿದ್ದಾನೆ. ಆತನ ಹೊಡೆತದಿಂದ ತಪ್ಪಿಸಿಕೊಂಡು ಪತ್ನಿ ಓಡಿ ಹೋಗಿದ್ದು ದೊಣ್ಣೆ ಹೊಡೆತಕ್ಕೆ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...