alex Certify ಅಪಘಾತದಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದವನನ್ನ ಕಾಪಾಡಿದ ಐಎಎಸ್​ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಘಾತದಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದವನನ್ನ ಕಾಪಾಡಿದ ಐಎಎಸ್​ ಅಧಿಕಾರಿ

ಹೆಚ್ಚುತ್ತಿರುವ ಕೊರೊನಾ ಪ್ರಕರಣದಿಂದಾಗಿ ಬಹುತೇಕ ರಾಜ್ಯಗಳಲ್ಲಿ ಲಾಕ್ ಡೌನ್​ ಮಾದರಿಯ ನಿಬಂಧನೆಗಳನ್ನ ವಿಧಿಸಲಾಗಿದೆ.

ಒಡಿಶಾದಲ್ಲೂ ಸದ್ಯ ಇದೇ ಮಾದರಿಯ ಪರಿಸ್ಥಿತಿ ಇದೆ. ಪುರಿ – ಭುವನೇಶ್ವರ ಹೆದ್ದಾರಿಯಲ್ಲಿ ಬರುವ ಕೌಸಲ್ಯಾಗಂಜ್​ನಲ್ಲಿ ವ್ಯಕ್ತಿಯೊಬ್ಬ ರಸ್ತೆ ಅಪಘಾತಕ್ಕೀಡಾಗಿದ್ದ. ಸಹಾಯಕ್ಕಾಗಿ ಅಂಗಲಾಚೋಣ ಅಂದರೆ ಲಾಕ್​ಡೌನ್​ನಿಂದಾಗಿ ಸಂಪೂರ್ಣ ರಸ್ತೆ ನಿರ್ಜನವಾಗಿತ್ತು. ಈ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಬಂದಿದ್ದ ಐಎಎಸ್​ ಅಧಿಕಾರಿ ಡಾ. ಕೃಷ್ಣನ್​ ಕುಮಾರ್​​ ಅಪಘಾತಕ್ಕೀಡಾದ ವ್ಯಕ್ತಿಯನ್ನ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಮುಖ್ಯ ಆಡಳಿತಗಾರರೂ ಆಗಿರುವ ಐಎಎಸ್​ ಅಧಿಕಾರಿ ಪುರಿ ರಥಯಾತ್ರೆಗಾಗಿ ನಿರ್ಮಾಣವಾಗುತ್ತಿರುವ ರಥವನ್ನ ಪರಿಶೀಲಿಸಲು ತೆರಳಿದ್ದರು. ಈ ಕಾರ್ಯವನ್ನ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಮಾರ್ಗಮಧ್ಯದಲ್ಲಿ ಅಪಘಾತವನ್ನ ಕೃಷ್ಣನ್​ ಕಂಡಿದ್ದಾರೆ. ಸಹಾಯಕ್ಕಾಗಿ ಅಂಗಲಾಚುತ್ತಿದ್ದ ವ್ಯಕ್ತಿಯನ್ನ ತನ್ನ ಸ್ವಂತ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೂಲಕ ಮಾನವೀಯತೆ ಮೆರೆದ್ರು.

ರತ್ನಾಕರ್​ ಎಂಬಾತನಿಗೆ ವಾಹನವೊಂದು ಡಿಕ್ಕಿ ಹೊಡೆದಿತ್ತು. ನಿರ್ಜನ ರಸ್ತೆಯಲ್ಲಿ ರತ್ನಾಕರ್​ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಸಹ ವಾಹನ ಚಾಲಕ ವಾಹನ ಸಮೇತ ಸ್ಥಳದಿಂದ ಕಾಲ್ಕಿತ್ತಿದ್ದ. ಇದಾದ ಬಳಿಕ ಸ್ಥಳಕ್ಕೆ ಆಗಮಿಸಿದ ಐಎಎಸ್​ ಅಧಿಕಾರಿ ರತ್ನಾಕರ್​ ಪ್ರಾಣವನ್ನ ಕಾಪಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...