alex Certify ಈ ರಾಜ್ಯದಲ್ಲಿ ಮನೆ ಬಾಗಿಲಿಗೆ ಬರಲಿದೆ ಪಡಿತರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಜ್ಯದಲ್ಲಿ ಮನೆ ಬಾಗಿಲಿಗೆ ಬರಲಿದೆ ಪಡಿತರ…!

ಆಂಧ್ರ ಪ್ರದೇಶ ಸಿಎಂ ವೈ.ಎಸ್.​​ ಜಗನ್​​ ಮೋಹನ್​ ರೆಡ್ಡಿ ಪಡಿತರರ ಮನೆ ಬಾಗಿಲಿಗೆ ರೇಷನ್​ ತಲುಪಿಸುವ ನೂತನ ಯೋಜನೆಗೆ ಚಾಲನೆ ನೀಡಿದ್ದಾರೆ. 2500 ಮೊಬೈಲ್​ ವಿತರಣಾ ಘಟಕಗಳ ನೆರವಿನಿಂದ ವಿಜಯವಾಡದಿಂಡ ಪಡಿತರ ಹೊಂದಿರುವವರ ಮನೆಗೇ ಬಂದು ರೇಷನ್​ ತಲುಪಲಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಸಿಎಂ ಜಗನ್​ ಮೋಹನ ರೆಡ್ಡಿ, ನಾನು ದಿವ್ಯಾಂಗ ಹಾಗೂ ವೃದ್ಧರನ್ನ ಪಡಿತರಕ್ಕಾಗಿ ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತಿರೋದನ್ನ ಕಂಡಿದ್ದೇನೆ. ಹೀಗಾಗಿ ನಮ್ಮ ಸರ್ಕಾರ ಪಡಿತರವನ್ನ ಮನೆ ಬಾಗಿಲಿಗೇ ತಲುಪಿಸುವ ವಿಶೇಷ ಯೋಜನೆಯೊಂದನ್ನ ಆರಂಭಿಸಿದೆ. ವಾಹನಗಳ ಮುಖಾಂತರ ಉತ್ತಮ ಗುಣಮಟ್ಟದ ಅಕ್ಕಿ, ಸಕ್ಕರೆ ಸೇರಿದಂತೆ ವಿವಿಧ ದಾನ್ಯಗಳು ನಿಮ್ಮನೆಗೆ ಬರಲಿದೆ. ಈ ಯೋಜನೆಯಿಂದ ಸರ್ಕಾರಕ್ಕೆ ಪ್ರತಿ ವರ್ಷ 830 ಕೋಟಿ ಅಧಿಕ ಖರ್ಚು ಆಗಲಿದೆ ಎಂದು ಹೇಳಿದ್ರು.

ಪಡಿತರದಲ್ಲಿ ವಿತರಿಸಲಾಗುವ ಅಕ್ಕಿ ಹಾಗೂ ಇತರೆ ಧಾನ್ಯಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬ ಆರೋಪವಿದೆ. ಹೀಗಾಗಿ ಅನೇಕರು ಪಡಿತರ ಧಾನ್ಯಗಳನ್ನ ತಿರಸ್ಕರಿಸುತ್ತಿದ್ದಾರೆ. ಇದನ್ನ ಸರಿಪಡಿಸುವ ಸಲುವಾಗಿ ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಮನೆಗೆ ಉತ್ತಮ ಗುಣಮಟ್ಟದ ಅಕ್ಕಿ ಬಂದು ತಲುಪಲಿದೆ ಎಂದು ಭರವಸೆ ನೀಡಿದ್ರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...