ಉದ್ಯಮಿ ಆನಂದ್ ಮಹೀಂದ್ರಾ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಬಹಳ ಪ್ರೇರಣಾದಾಯಕ ಕಥೆಗಳನ್ನು ಹಂಚಿಕೊಳ್ಳುತ್ತಲೇ ಬರುತ್ತಿದ್ದಾರೆ. ತಮ್ಮ 80 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಒಳ್ಳೊಳ್ಳೆ ಮೋಟಿವೇಷನಲ್ ಪೋಸ್ಟ್ಗಳ ಮೂಲಕ ಎಂಗೇಜ್ ಮಾಡಿಕೊಂಡು ಇದ್ದಾರೆ ಮಹೀಂದ್ರಾ.
ಈ ಬಾರಿ ಅವರು ವಿನೋದಮಯವಾದ ಪೋಸ್ಟ್ ಒಂದನ್ನು ಮಾಡಿದ್ದು, ಸ್ನಾನದ ಮನೆಯ ಬಚ್ಚಲು ನೀರನ್ನು ಹೊರಹೋಗುವಂತೆ ವಿವೇಚನಾರಹಿತ ಯೋಜನೆಯೊಂದನ್ನು ಮಾಡಿರುವ ಚಿತ್ರ ಹಂಚಿಕೊಂಡಿದ್ದಾರೆ.
“ವಾಸ್ತವಿಕವಾದ ಆಲೋಚನೆ ಮಾಡಲು ಜನರಿಗೆ ಇರುವ ಕ್ಷಮತೆ ಬಗ್ಗೆ ನನಗೆ ಅಪಾರ ನಂಬಿಕೆ ಇದೆ. ಆದರೆ, ಕೆಲವೊಮ್ಮೆ ಆ ಎಲ್ಲಾ ಆಶಯಗಳನ್ನೂ ಬಿಟ್ಟುಬಿಡುವಂತೆ ಆಗುತ್ತೆ…..” ಎಂದು ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ ಆನಂದ್ ಮಹೀಂದ್ರಾ.