alex Certify ಮಮತಾ ಬ್ಯಾನರ್ಜಿಗೆ ಶನಿವಾರ ಶಾಕ್​ ಕೊಡ್ತಾರಾ ಸಂಸದೆ ಶತಾಬ್ದಿ ರಾಯ್​..!? ಸಂಚಲನಕ್ಕೆ ಕಾರಣವಾಯ್ತು ಫೇಸ್​ಬುಕ್ ಪೋಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಮತಾ ಬ್ಯಾನರ್ಜಿಗೆ ಶನಿವಾರ ಶಾಕ್​ ಕೊಡ್ತಾರಾ ಸಂಸದೆ ಶತಾಬ್ದಿ ರಾಯ್​..!? ಸಂಚಲನಕ್ಕೆ ಕಾರಣವಾಯ್ತು ಫೇಸ್​ಬುಕ್ ಪೋಸ್ಟ್

ಮುಂದಿನ ತಿಂಗಳು 50 ತೃಣಮೂಲ ಶಾಸಕರು ವಿರೋಧ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್​ ಘೋಷ್​ ಹೇಳಿದ ಬೆನ್ನಲ್ಲೇ ಸಚಿವ ಜ್ಯೋತಿ ಪ್ರಿಯ ಮಲ್ಲಿಕ್​ ಮೇ ತಿಂಗಳಲ್ಲಿ ಆರರಿಂದ ಏಳು ಬಿಜೆಪಿ ಸಂಸದರು ತೃಣ ಮೂಲ ಕಾಂಗ್ರೆಸ್​ಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳುವ ಮೂಲಕ ಶಾಕ್ ನೀಡಿದ್ದರು.

ಈ ಎಲ್ಲ ಏರಿಳಿತಗಳ ನಡುವೆ ಟಿಎಂಸಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಂಸದೆ ಶತಾಬ್ದಿ ರಾಯ್​​ , ಶನಿವಾರ ತಮ್ಮ ರಾಜಕೀಯ ಭವಿಷ್ಯ ಕುರಿತಂತೆ ಮಹತ್ವದ ಮಾಹಿತಿ ನೀಡೋದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಇದೀಗ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಶತಾಬ್ದಿ ರಾಯ್​ ಫ್ಯಾನ್ಸ್ ಕ್ಲಬ್​ ಅಪ್​ಲೋಡ್​ ಮಾಡಿದ ಫೇಸ್​ಬುಕ್​ ಪೋಸ್ಟ್​ನಲ್ಲಿ, ಇತ್ತೀಚಿನ ದಿನಗಳಲ್ಲಿ ನಾನು ಪಕ್ಷದ ಕಾರ್ಯಕ್ರಮಗಳಿಗೆ ಗೈರಾಗುತ್ತಿರೋದ್ರ ಬಗ್ಗೆ ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ನಾನು ಜನರನ್ನ ತಲುಪಲು ಯತ್ನಿಸುತ್ತಿದ್ದೇನೆ. ಆದರೆ ನಾನು ಜನರ ಬಳಿ ತಲುಪಬಾರದು ಎಂಬ ಕಾರಣಕ್ಕೇ ಪಕ್ಷದ ಕಾರ್ಯಕ್ರಮಗಳ ಬಗ್ಗೆ ನನಗೆ ಮಾಹಿತಿಯನ್ನೇ ನೀಡಲಾಗುತ್ತಿಲ್ಲ. ಆದ್ದರಿಂದ ಈ ಹೊಸ ವರ್ಷದಲ್ಲಿ ನಾನು ಜನರೊಂದಿಗೆ ಸಂಪೂರ್ಣವಾಗಿ ಇರಲು ಬಯಸುತ್ತೇನೆ. ಶನಿವಾರ ಮಧ್ಯಾಹ್ನ 2 ಗಂಟೆಗೆ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಬರೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...