alex Certify ಹರಿದ ನೋಟು ನಿರಾಕರಿಸಿದ್ದಕ್ಕೆ ಪಿಜ್ಜಾ ಡೆಲಿವರಿ ಬಾಯ್‌ಗೆ ಗುಂಡೇಟು, ಚಿಂತಾಜನಕ ಸ್ಥಿತಿಯಲ್ಲಿ ಯುವಕ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹರಿದ ನೋಟು ನಿರಾಕರಿಸಿದ್ದಕ್ಕೆ ಪಿಜ್ಜಾ ಡೆಲಿವರಿ ಬಾಯ್‌ಗೆ ಗುಂಡೇಟು, ಚಿಂತಾಜನಕ ಸ್ಥಿತಿಯಲ್ಲಿ ಯುವಕ!

ಹರಿದು ಹೋಗಿದ್ದ 200 ರೂಪಾಯಿ ನೋಟನ್ನು ಸ್ವೀಕರಿಸಲು ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಇಬ್ಬರು ಪಿಜ್ಜಾ ಡೆಲಿವರಿ ಬಾಯ್‌ ಮೇಲೆ ಗುಂಡು ಹಾರಿಸಿದ್ದಾರೆ. ಉತ್ತರಪ್ರದೇಶದ ಶಹಜಾನ್‌ಪುರದಲ್ಲಿ ಈ ಘಟನೆ ನಡೆದಿದೆ. ಗುಂಡೇಟು ತಿಂದಿರುವ 21 ವರ್ಷದ ಯುವಕನ ಸ್ಥಿತಿ ಗಂಭೀರವಾಗಿದೆ.

ಯುವಕನನ್ನು ಸಚಿನ್‌ ಕಶ್ಯಪ್‌ ಎಂದು ಗುರುತಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬರೇಲಿಯ ವಿಶೇಷ ವೈದ್ಯಕೀಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಸಹೋದರರಾದ ನದೀಮ್‌ ಖಾನ್‌ ಹಾಗೂ ನಯೀಮ್‌ ಎಂಬುವವರು ರಾತ್ರಿ 11 ಗಂಟೆ ವೇಳೆಗೆ ಪಿಜ್ಜಾ ಆರ್ಡರ್‌ ಮಾಡಿದ್ದರು.

ಸಚಿನ್‌ ಮತ್ತವನ ಸಹೋದ್ಯೋಗಿ ರಿತಿಕ್‌ ಕುಮಾರ್‌ 11.30ರ ವೇಳೆಗೆ ಪಿಜ್ಜಾ ಡೆಲಿವರಿ ಮಾಡಿ, ಹಣ ಪಡೆದುಕೊಂಡು ಹೋಗಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ನದೀಮ್‌ ಹಾಗೂ ನಯೀಮ್‌ ಸಾಫ್ಟ್‌ ಡ್ರಿಂಕ್‌ ಕೊಳ್ಳಲು ಬಂದಿದ್ದಾರೆ. 200 ರೂಪಾಯಿ ಹರಿದ ನೋಟನ್ನು ಕೊಟ್ಟಿದ್ದಾರೆ.

ಅದನ್ನು ಸ್ವೀಕರಿಸಲು ಸಾಧ್ಯವಿಲ್ಲವೆಂದು ಅಂಗಡಿಯಾತ ನಿರಾಕರಿಸಿದರೂ ಒಪ್ಪಿಲ್ಲ. ಬೇರೆ ನೋಟು ಕೊಡುವಂತೆ ಕೇಳಲು ಸಚಿನ್‌, ನದೀಮ್‌ ಮನೆ ಬಳಿ ಬಂದಿದ್ದ. ಇದರಿಂದ ಸಿಟ್ಟಿಗೆದ್ದ ನದೀಮ್‌ ಕಂಟ್ರಿ ಮೇಡ್‌ ಪಿಸ್ತೂಲ್‌ನಿಂದ ಸಚಿನ್‌ ಮೇಲೆ ಗುಂಡು ಹಾರಿಸಿದ್ದಾನೆ.

ಗುಂಡಿನ ಸದ್ದು ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಈಗಾಗ್ಲೇ ಆರೋಪಿಗಳನ್ನು ಬಂಧಿಸಿದ್ದು, ಪಿಸ್ತೂಲ್‌ ಅನ್ನು ಸಹ ವಶಪಡಿಸಿಕೊಂಡಿದ್ದಾರೆ. ವಿನಾಕಾರಣ ಗುಂಡೇಟು ತಿಂದ ಸಚಿನ್‌ ಜೀವನ್ಮರಣ ಹೋರಾಟ ನಡೆಸ್ತಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...