alex Certify ಶಾಕಿಂಗ್‌ ಸಂಗತಿ ಬಹಿರಂಗ: ನಟ ಸಲ್ಮಾನ್‌ ಹತ್ಯೆಗೆ ಸಿದ್ದವಾಗಿತ್ತು ಸ್ಕೆಚ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್‌ ಸಂಗತಿ ಬಹಿರಂಗ: ನಟ ಸಲ್ಮಾನ್‌ ಹತ್ಯೆಗೆ ಸಿದ್ದವಾಗಿತ್ತು ಸ್ಕೆಚ್

ನಟ ಸಲ್ಮಾನ್ ಖಾನ್ ನಟನೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ. ಹಲವಾರು ಸಿನಿಮಾಗಳ ಮೂಲಕ ಅಭಿಮಾನಿಗಳ ಮನಗೆದ್ದ ನಟ. ಈ ನಟನಿಗೆ ಲಾಕ್‌ ಡೌನ್‌ನಿಂದಾಗಿಯೇ ಪ್ರಾಣ ಉಳಿದಿದೆ ಎಂದರೆ ನೀವು ನಂಬಲೇಬೇಕು. ಲಾಕ್ ‌ಡೌನ್ ಇರದಿದ್ದರೆ ಸಲ್ಲು ಏನಾಗುತ್ತಿದ್ದರೋ ಗೊತ್ತಿಲ್ಲ.

ಹೌದು, ಸಲ್ಲು ಹತ್ಯೆಗೆ ಸಂಚು ನಡೆದಿತ್ತಂತೆ. ಅವರನ್ನು ಹತ್ಯೆ ಮಾಡಬೇಕೆಂದು ರಾಹುಲ್ ಎಂಬ ಶಾರ್ಪ್‌ಶೂಟರ್ ಸ್ಕೆಚ್ ಹಾಕಿದ್ದ ಎಂಬ ಮಾಹಿತಿ ಇದೀಗ ಹೊರ ಬಂದಿದೆ. ಜನವರಿಯಲ್ಲಿಯೇ ಈತ ಸ್ಕೆಚ್ ಹಾಕಿದ್ದನಂತೆ. ಆದರೆ ಲಾಕ್‌ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಈ ಸ್ಕೆಚ್ ಮಿಸ್ ಆಗಿದೆ.

ಇನ್ನು ಸಲ್ಲು ಹತ್ಯೆಗೆಂದು ರಾಹುಲ್ ಎಂಬ ಶಾರ್ಪ್‌ಶೂಟರ್‌ಗೆ ಸುಪಾರಿ ಕೊಟ್ಟಿದ್ದು, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ. ಕೃಷ್ಣಮೃಗ ಬೇಟೆ ಪ್ರಕರಣದ ಸಂಬಂಧ ಈ ಇಬ್ಬರ ನಡುವೆ ದ್ವೇಷ ಇತ್ತಂತೆ. ಹೀಗಾಗಿಯೇ ಸಲ್ಲು ಹತ್ಯೆ ಮಾಡಿಸಲು ಲಾರೆನ್ಸ್ ಬಿಷ್ಣೋಯಿ ಮುಂದಾಗಿದ್ದಾನೆ.

ಇನ್ನು ರಾಹುಲ್, ಫರೀದಾಬಾದ್‌ನಲ್ಲಿ ನಡೆದ ಜೋಡಿ ಕೊಲೆ ಆರೋಪಿ. ಈತನನ್ನು ಪೊಲೀಸರು ಬಂಧನ ಮಾಡಿ ವಿಚಾರಣೆ ಮಾಡಿದಾಗ ಈ ವಿಚಾರ ಹೊರ ಬಂದಿದೆ. ಸದ್ಯ ರಾಹುಲ್ ನ್ಯಾಯಾಂಗ ಬಂಧನದಲ್ಲಿದ್ದಾನೆ. ಸಲ್ಮಾನ್ ಖಾನ್‌ರ ಎಲ್ಲಾ ಚಲನವಲನಗಳ ಬಗ್ಗೆ ರಾಹುಲ್ ತಿಳಿದುಕೊಂಡಿದ್ದನಂತೆ. ಈ ಹತ್ಯೆ ಸ್ಕೆಚ್ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಗೆ ಭದ್ರತೆ ಹೆಚ್ಚಿಸಲು ಪೊಲೀಸರು ತೀರ್ಮಾನ ಮಾಡಿದ್ದಾರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...