ಕೊರೊನಾ ಲಾಕ್ ಡೌನ್ ಮಧ್ಯೆ ಜನರು ತಮ್ಮ ಗ್ರಾಮಗಳಿಗೆ ಬಸ್, ರೈಲು, ಕಾಲ್ನಡಿಗೆಯಲ್ಲಿ ಮನೆ ತಲುಪುತ್ತಿದ್ದಾರೆ. ಈ ಮಧ್ಯೆ ಆಘಾತಕಾರಿ ಘಟನೆಯೊಂದು ನಡೆದಿದೆ. ಬಸ್ ನಲ್ಲಿ ಶವದ ಜೊತೆ ಕಾರ್ಮಿಕರು 20 ಗಂಟೆಗಳ ಕಾಲ ಪ್ರಯಾಣ ಬೆಳೆಸಿದ್ದಾರೆ.
ಮಹಾರಾಷ್ಟ್ರದಿಂದ ಬಸ್ನಲ್ಲಿ ಬಂಗಾಳಕ್ಕೆ ಹಿಂದಿರುಗುತ್ತಿದ್ದರು. ವರದಿಯ ಪ್ರಕಾರ ಈ ಬಸ್ನಲ್ಲಿ 34 ಜನರಿದ್ದರು. ಬಸ್ ಆಂಧ್ರಪ್ರದೇಶ ಮತ್ತು ಒಡಿಶಾದ ಗಡಿಯನ್ನು ತಲುಪಿದ ಕೂಡಲೇ ಪ್ರಯಾಣಿಕನೊಬ್ಬನಿಗೆ ತೀವ್ರ ಜ್ವರ ಕಾಣಿಸಿಕೊಂಡಿದೆ. ಉಸಿರಾಟದ ತೊಂದರೆಯೂ ಇತ್ತು. ಒಂದು ಗಂಟೆಯೊಳಗೆ ಆತ ಸಾವನ್ನಪ್ಪಿದ್ದಾರೆ. ಈ ವ್ಯಕ್ತಿ ಮುಂಬೈನ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ.
ಒಡಿಶಾ ಬಾರ್ಡರ್ ನಲ್ಲಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರಂತೆ. ಪೊಲೀಸರು ಇದನ್ನು ಕೇಳಲು ಸಿದ್ಧರಿರಲಿಲ್ಲವಂತೆ. ಶವದ ಜೊತೆಯೇ ಅವ್ರು 20 ಗಂಟೆಗಳ ಕಾಲ ಪ್ರಯಾಣ ಬೆಳೆಸಿದ್ದರಂತೆ.