ಮಧ್ಯಪ್ರದೇಶದ ಬಾಲಘಾಟ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ 8 ವರ್ಷದ ಮಗನನ್ನು ಹತ್ಯೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಮಗನ ಕೈ ಕಟ್ಟಿ ನದಿಯಲ್ಲಿ ಮುಳುಗಿಸಿದ್ದಾನೆ.
ಹುಟ್ಟುಹಬ್ಬಕ್ಕೆ ಕೇಕ್ ತರುವ ನೆಪದಲ್ಲಿ ಆತನನ್ನು ಪೇಟೆಗೆ ಕರೆದೊಯ್ದ ತಂದೆ ಮಗನ ಕೈ ಕಟ್ಟಿದ್ದಾನೆ. ನಂತ್ರ ನದಿಯಲ್ಲಿ ಮುಳುಗಿಸಿ ಹತ್ಯೆಗೈದಿದ್ದಾನೆ. ನಂತ್ರ ಮನೆಗೆ ಬಂದು ಮಗನನ್ನು ಹತ್ಯೆ ಮಾಡಿರುವ ವಿಷ್ಯ ಹೇಳಿದ್ದಲ್ಲದೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಮಗನ ಕೈ ಕಟ್ಟಿ ನದಿಗೆ ಎಸೆದಿದ್ದೇನೆ. ನನ್ನ ವಂಶವನ್ನು ಮುಗಿಸಿದ್ದೇನೆಂದು ಹೇಳಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಶವ ವಶಕ್ಕೆ ಪಡೆದಿದ್ದಾರೆ. ಆರೋಪಿ ಬಳಿ ಯಾವುದೇ ಕೆಲಸವಿರಲಿಲ್ಲ. ಹಾಗಾಗಿ ಆತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.