ಮಧ್ಯಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ 17 ವರ್ಷದ ಸಂಬಂಧಿ ಜೊತೆ ಸಂಬಂಧ ಬೆಳೆಸಿದ್ದಾನೆ. ಆಕೆ ಗರ್ಭಧರಿಸುತ್ತಿದ್ದಂತೆ ಆಪರೇಷನ್ ಮಾಡಿಸಲು ಆಕೆ ತಾಯಿಗೆ ಹೇಳಿದ್ದಾನೆ. ಆಪರೇಷನ್ ವೇಳೆ ಪೀಡಿತೆ ಸಾವನ್ನಪ್ಪಿದ್ದಾಳೆ.
ಕಿರಣ್ ಹೆಸರಿನ ವ್ಯಕ್ತಿ ಕೊಲ್ಕತ್ತಾದಲ್ಲಿ ಕೆಲಸ ಮಾಡ್ತಿದ್ದಾನೆ. ಜನವರಿಯಲ್ಲಿ ಆತ ಊರಿಗೆ ಬಂದಿದ್ದ ಎನ್ನಲಾಗಿದೆ. ಅತ್ತೆಯ ಕಿರಿ ಮಗಳ ಜೊತೆ ಆಪ್ತವಾಗಿ ವರ್ತಿಸಿದ್ದಾನೆ. ಕೆಲ ದಿನಗಳ ನಂತ್ರ ಕೊಲ್ಕತ್ತಾಗೆ ವಾಪಸ್ ಹೋಗಿದ್ದಾನೆ. ಈ ಮಧ್ಯೆ ಮಗಳ ವರ್ತನೆ ಬದಲಾಗಿದ್ದನ್ನು ನೋಡಿ ತಾಯಿ ವಿಚಾರಿಸಿದ್ದಾಳೆ.
ಆಗ ತಾಯಿಗೆ ಮಗಳು ಗರ್ಭಿಣಿ ಎಂಬ ಸಂಗತಿ ಗೊತ್ತಾಗಿದೆ. ಕಿರಣ್ ಗೆ ಫೋನ್ ಮಾಡಿದ ತಾಯಿ ವಿಷ್ಯ ತಿಳಿಸಿದ್ದಾಳೆ. ಕಿರಣ್, ಲಾಕ್ ಡೌನ್ ಕಾರಣ ಊರಿಗೆ ಬರಲು ಸಾಧ್ಯವಿಲ್ಲ. ಆಪರೇಷನ್ ಮಾಡಿಸಿ. ಖರ್ಚು ನೀಡ್ತೆನೆ ಎಂದಿದ್ದಾನೆ. ಪೀಡಿತೆ ತಾಯಿ ಖಾಸಗಿ ಆಸ್ಪತ್ರೆಯಲ್ಲಿ ಮಗಳ ಆಪರೇಷನ್ ಮಾಡಿಸಿದ್ದಾಳೆ. ಆದ್ರೆ ಹೊಟ್ಟೆ ನೋವು ಕಡಿಮೆಯಾಗದೆ ಬೇರೆ ಆಸ್ಪತ್ರೆಗೆ ದಾಖಲಿಸಿದಾಗ ಆಪರೇಷನ್ ಸರಿಯಾಗಿಲ್ಲ ಎಂಬುದು ಗೊತ್ತಾಗಿದೆ. ಆದ್ರೆ ಚಿಕಿತ್ಸೆ ಫಲ ನೀಡದೆ ಪೀಡಿತೆ ಸಾವನ್ನಪ್ಪಿದ್ದಾಳೆ. ಪೊಲೀಸರು ಕಿರಣ್ ಹಾಗೂ ವೈದ್ಯರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.