alex Certify ಪತ್ನಿ ಸುಡಲು ಬಂದವನಿಗೆ ತಕ್ಕ ಶಾಸ್ತಿ: ಕೊನೆಗೂ ರಕ್ಷಣೆಗೆ ಬಂದವಳು ಹೆಂಡತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಸುಡಲು ಬಂದವನಿಗೆ ತಕ್ಕ ಶಾಸ್ತಿ: ಕೊನೆಗೂ ರಕ್ಷಣೆಗೆ ಬಂದವಳು ಹೆಂಡತಿ

ಪತಿ-ಪತ್ನಿ ಮಧ್ಯೆ ಜಗಳ ನಡೆಯೋದು ಮಾಮೂಲಿ. ಲಾಕ್ ಡೌನ್ ಸಂದರ್ಭದಲ್ಲಿ ಕೌಟುಂಬಿಕ ಗಲಾಟೆ ಹೆಚ್ಚಾಗಿದೆ. ಆದ್ರೆ ದೆಹಲಿಯಲ್ಲಿ ನಡೆದ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಪತ್ನಿಯನ್ನು ಸಡಲು ಯತ್ನಿಸಿದ್ದ ಪತಿಯೇ ಆಸ್ಪತ್ರೆ ಸೇರುವಂತಾಗಿದೆ.

ಆಸೀಫ್ ಲಾಕ್ ಡೌನ್ ಸಂದರ್ಭದಲ್ಲಿ ಮೀರತ್ ಗೆ ಹೋಗಿದ್ದ. ಎರಡು ತಿಂಗಳು ಅಲ್ಲಿಯೇ ಇದ್ದ. ದೂರವಿದ್ದರೂ ಇಬ್ಬರ ಮಧ್ಯೆ ಜಗಳ ಕಡಿಮೆಯಾಗಿರಲಿಲ್ಲ. ಎರಡು ದಿನಗಳ ಹಿಂದೆ ವಾಪಸ್ ಬಂದ ಆಸೀಫ್ ಜಗಳ ಮುಗಿಸಲು ಮುಂದಾಗಿದ್ದಾನೆ. ಪೆಟ್ರೋಲ್ ತಂದು ಮೊದಲು ಪತ್ನಿಗೆ ಹಾಕಿ ನಂತ್ರ ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದಾನೆ.

ಇದ್ರಿಂದ ಪತ್ನಿ ತಪ್ಪಿಸಿಕೊಂಡಿದ್ದಾಳೆ. ಆದ್ರೆ ಆಸೀಫ್ ಮೈಗೆ ಬೆಂಕಿ ಹತ್ತಿದೆ. ಇದನ್ನು ನೋಡಿದ ಪತ್ನಿ, ಪತಿಯನ್ನು ರಕ್ಷಿಸುವ ಯತ್ನ ನಡೆಸಿದ್ದಾಳೆ. ಸದ್ಯ ಆಸೀಫ್ ಆಸ್ಪತ್ರೆ ಸೇರಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...