alex Certify ಜಾಮಾ ಮಸೀದಿಯಲ್ಲಿ ಹವನ ಮಾಡುತ್ತೇವೆ ಎಂದ ಸಾಧ್ವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಮಾ ಮಸೀದಿಯಲ್ಲಿ ಹವನ ಮಾಡುತ್ತೇವೆ ಎಂದ ಸಾಧ್ವಿ

ಮಥುರಾ ದೇವಸ್ಥಾನದಲ್ಲಿ ನಮಾಜ್ ಮಾಡುವುದಾರೆ ದೆಹಲಿಯ ಜಾಮಾ ಮಸೀದಿಯಲ್ಲಿ ಹವನ ಮಾಡಲು ಮುಂದಾಗುವುದಾಗಿ ಬಲಪಂಥೀಯ ನಾಯಕಿ ಸಾಧ್ವಿ ಪ್ರಾಚಿ ಹೇಳಿದ್ದಾರೆ.

ಮಥುರಾದ ನಂದ ಬಾಬಾ ದೇವಸ್ಥಾನದಲ್ಲಿ ನಮಾಜ್ ಮಾಡಲು ಮುಂದಾಗಿದ್ದ ದೆಹಲಿಯ ಖುದಾಯಿ ಕಿದ್ಮತ್‌ಗರ್‌ ಸಂಘಟನೆಯ ಸದಸ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೋಮು ಸೌಹಾರ್ದತೆ ಮೆರೆಯುವ ಉದ್ದೇಶದಿಂದ ಹೀಗೆ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ್ದಾಗಿ ಈ ಗುಂಪಿನ ಸದಸ್ಯರು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಸಾಧ್ವಿ, ಸೌಹಾರ್ದವಾದಿಗಳಿಗೆ ಅಷ್ಟೆಲ್ಲಾ ಕಳಕಳಿ ಇದ್ದಲ್ಲಿ ತಮ್ಮೊಂದಿಗೆ ಸೇರಿಕೊಂಡು ದೆಹಲಿಯ ಜಾಮಾ ಮಸೀದಿಯಲ್ಲಿ ಹವನ ಮಾಡಲು ಬನ್ನಿ ಎಂದು ಕರೆದಿದ್ದಾರೆ.

ಇದೇ ವೇಳೆ ಹಿಂದೂ ಹುಡುಗಿಯರನ್ನು ಪ್ರಲೋಭನೆಗೆ ಒಳಪಡಿಸಿ ಅವರನ್ನು ಬಲವಂತವಾಗಿ ಮತಾಂತರ ಮಾಡುವ ಲವ್‌ ಜಿಹಾದ್‌ನಂಥ ವ್ಯವಸ್ಥಿತ ಕ್ರೈಂಗಳ ವಿರುದ್ಧ ತನಿಖೆ ನಡೆಸಲು ಸರ್ಕಾರಕ್ಕೆ ಸಾಧ್ವಿ ಆಗ್ರಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...