alex Certify ಕಂಟೈನ್ಮೆಂಟ್ ವಲಯದಲ್ಲಿರುವವರು ಇಡುತ್ತಿದ್ದಾರೆ ವಿಚಿತ್ರ ಬೇಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಟೈನ್ಮೆಂಟ್ ವಲಯದಲ್ಲಿರುವವರು ಇಡುತ್ತಿದ್ದಾರೆ ವಿಚಿತ್ರ ಬೇಡಿಕೆ

दिल्‍ली: कंटेनमेंट जोन के लोग मांग ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗ್ತಿದೆ. ಮುನ್ನೆಚ್ಚರಿಕೆಯಾಗಿ ಕಂಟೈನ್ಮೆಂಟ್ ವಲಯವನ್ನು ಮಾಡಲಾಗಿದೆ. ಅಲ್ಲಿನ ಜನರು ಹೊರಗೆ ಹೋಗುವಂತಿಲ್ಲ. ಆದ್ರೆ ಕಂಟೈನ್ಮೆಂಟ್ ವಲಯದಲ್ಲಿರುವ ಜನರು ಅಧಿಕಾರಿಗಳಿಗೆ ತಲೆನೋವು ತಂದಿದ್ದಾರೆ.

ಮನೆಗಳಿಗೆ ಬೀಗ ಹಾಕಿರುವ ಸ್ಥಳೀಯರು ಚಿಕನ್ ಬಿರಿಯಾನಿ, ಮಟನ್, ಪಿಜ್ಜಾ, ಸಿಹಿತಿಂಡಿಗಳು ಮತ್ತು ಬಿಸಿ ಸಮೋಸಾಗಳ ಬೇಡಿಕೆಯಿಡುತ್ತಿದ್ದಾರೆ. ಈ ಪ್ರದೇಶಗಳ ಜನರಿಗೆ ಮನೆಯಿಂದ ಹೊರಹೋಗಲು ಅವಕಾಶವಿಲ್ಲ. ಸರ್ಕಾರ ಜನರ ಮನೆಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದೆ.

ಅಧಿಕಾರಿಯೊಬ್ಬರು ತಮ್ಮ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಂಟೈನ್ಮೆಂಟ್ ವಲಯದಲ್ಲಿರುವ ಜನರ ಬೇಡಿಕೆ ಹೆಚ್ಚಾಗ್ತಿದೆ. ಒಬ್ಬರು ಚಿಕನ್, ಮಟನ್ ಕೇಳಿದ್ರೆ ಮತ್ತೆ ಕೆಲವರು ಸಿಹಿ ತಿಂಡಿ ಕೇಳ್ತಿದ್ದಾರೆ. ಪರಿಸ್ಥಿತಿ ಅರ್ಥ ಮಾಡಿಕೊಂಡು ಜನರು ನಮ್ಮ ಜೊತೆ ಸ್ಪಂದಿಸುತ್ತಿಲ್ಲವೆಂದು ಅಧಿಕಾರಿಗಳು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...