ಇತ್ತೀಚೆಗೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದ ರೈಲು ದುರಂತ ನಿಜಕ್ಕೂ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಕೊಂಚ ಹೊತ್ತು ವಿಶ್ರಾಂತಿ ಪಡೆಯಲು ಹಳಿಯ ಮೇಲೆ ಮಲಗಿದ್ದವರು ಮತ್ತೊಮ್ಮೆ ಎದ್ದು ಬರದ ಜಾಗಕ್ಕೆ ಹೋದರು. ಈ ಘಟನೆ ತಲ್ಲಣಗೊಳಿಸಿದ್ದಂತೂ ಸತ್ಯ. ಇನ್ನೊಮ್ಮೆ ಈ ಘಟನೆ ನಡೆಯಬಾರದೆಂಬ ಉದ್ದೇಶದಿಂದ ರೈಲ್ವೇ ಇಲಾಖೆ ಎಚ್ಚೆತ್ತುಕೊಂಡಿದೆ.
ಗೂಡ್ಸ್ ರೈಲುಗಳ ವೇಗವನ್ನು ಕಡಿಮೆ ಮಾಡಲು ಆಗ್ನೇಯ ರೈಲ್ವೆ ನಿರ್ಧಾರ ಮಾಡಲಾಗಿದ್ದು, ಈಗಾಗಲೇ ಆಯಾಯ ರೈಲು ಚಾಲಕರಿಗೆ ಸೂಚನೆಯನ್ನು ನೀಡಲಾಗಿದೆ. ಖರಾಗ್ಪುರ-ಭದ್ರಕ್ ನಡುವಣ ಸಂಚರಿಸುವ ಗೂಡ್ಸ್ ರೈಲುಗಳ ವೇಗವನ್ನು 40 ಕಿಲೋ ಮೀಟರ್ ಗೆ ಇಳಿಸಲಾಗಿದೆ.
ಇನ್ನು ವಲಸೆ ಕಾರ್ಮಿಕರ ಮೇಲೆ ಹೆಚ್ಚಿನ ನಿಗಾ ಇಡುವಂತೆ ಸೂಚಿಸಲಾಗಿದೆ. ಜನ ಓಡಾಡುವಂತಹ ಪ್ರದೇಶಗಳಲ್ಲಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಹೆಚ್ಚಿನದಾಗಿ ಹಾರನ್ ಬಳಕೆ ಮಾಡುವಂತೆ ಸೂಚಿಸಲಾಗಿದೆ. ಈ ಮೂಲಕ ಮುನ್ನೆಚ್ಚರಿಕೆ ಕ್ರಮವನ್ನು ರೈಲ್ವೆ ಇಲಾಖೆ ವಹಿಸಿದೆ.