alex Certify ಔರಂಗಾಬಾದ್ ರೈಲು ದುರಂತದ ನಂತರ ಎಚ್ಚೆತ್ತುಕೊಂಡ ರೈಲ್ವೆ ಇಲಾಖೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಔರಂಗಾಬಾದ್ ರೈಲು ದುರಂತದ ನಂತರ ಎಚ್ಚೆತ್ತುಕೊಂಡ ರೈಲ್ವೆ ಇಲಾಖೆ..!

ಇತ್ತೀಚೆಗೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದ ರೈಲು ದುರಂತ ನಿಜಕ್ಕೂ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಕೊಂಚ ಹೊತ್ತು ವಿಶ್ರಾಂತಿ ಪಡೆಯಲು ಹಳಿಯ ಮೇಲೆ ಮಲಗಿದ್ದವರು ಮತ್ತೊಮ್ಮೆ ಎದ್ದು ಬರದ ಜಾಗಕ್ಕೆ ಹೋದರು. ಈ ಘಟನೆ ತಲ್ಲಣಗೊಳಿಸಿದ್ದಂತೂ ಸತ್ಯ‌. ಇನ್ನೊಮ್ಮೆ ಈ ಘಟನೆ ನಡೆಯಬಾರದೆಂಬ ಉದ್ದೇಶದಿಂದ ರೈಲ್ವೇ ಇಲಾಖೆ ಎಚ್ಚೆತ್ತುಕೊಂಡಿದೆ.

ಗೂಡ್ಸ್ ರೈಲುಗಳ ವೇಗವನ್ನು ಕಡಿಮೆ ಮಾಡಲು ಆಗ್ನೇಯ ರೈಲ್ವೆ ನಿರ್ಧಾರ ಮಾಡಲಾಗಿದ್ದು, ಈಗಾಗಲೇ ಆಯಾಯ ರೈಲು ಚಾಲಕರಿಗೆ ಸೂಚನೆಯನ್ನು ನೀಡಲಾಗಿದೆ‌. ಖರಾಗ್ಪುರ-ಭದ್ರಕ್ ನಡುವಣ ಸಂಚರಿಸುವ ಗೂಡ್ಸ್ ರೈಲುಗಳ ವೇಗವನ್ನು 40 ಕಿಲೋ ಮೀಟರ್ ಗೆ ಇಳಿಸಲಾಗಿದೆ.

ಇನ್ನು ವಲಸೆ ಕಾರ್ಮಿಕರ ಮೇಲೆ ಹೆಚ್ಚಿನ ನಿಗಾ ಇಡುವಂತೆ ಸೂಚಿಸಲಾಗಿದೆ. ಜನ ಓಡಾಡುವಂತಹ ಪ್ರದೇಶಗಳಲ್ಲಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಹೆಚ್ಚಿನದಾಗಿ ಹಾರನ್ ಬಳಕೆ ಮಾಡುವಂತೆ ಸೂಚಿಸಲಾಗಿದೆ. ಈ ಮೂಲಕ ಮುನ್ನೆಚ್ಚರಿಕೆ ಕ್ರಮವನ್ನು ರೈಲ್ವೆ ಇಲಾಖೆ ವಹಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...