alex Certify ಈಗ ಮೊಬೈಲ್ ನಲ್ಲೇ ಮಾರಾಟ ಮಾಡಬಹುದು ಬೆಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಗ ಮೊಬೈಲ್ ನಲ್ಲೇ ಮಾರಾಟ ಮಾಡಬಹುದು ಬೆಳೆ…!

ಲಾಕ್ ಡೌನ್ ಸಮಯದಲ್ಲಿ ರೈತರಿಗೆ ಕೃಷಿ ಮಾಡಲು ಅನುಮತಿ ನೀಡಲಾಗಿದೆ. ಆದ್ರೆ ಬೆಳೆಗಳ ಮಾರಾಟ ಹೇಗೆ ಎಂಬ ಚಿಂತೆ ಕಾಡಿದೆ. ಇನ್ಮುಂದೆ ರೈತರು ಆತಂಕ ಪಡುವ ಅಗತ್ಯವಿಲ್ಲ. ರೈತರ ಬೆಳೆಗಳನ್ನು ಮಾರಾಟಕ್ಕೆ ಸಹಾಯ ಮಾಡಲು ಈಗ ಹೊಸ ಆಪ್ ಪ್ರಾರಂಭಿಸಲಾಗಿದೆ. ಅದರ ಸಹಾಯದಿಂದ ರೈತರು ಯಾವುದೆ ಚಿಂತೆಯಿಲ್ಲದೆ ಬೆಳೆ ಮಾರಾಟ ಮಾಡಬಹುದು.

ಲಾಕ್ ಡೌನ್ ಸಮಯದಲ್ಲಿ ರೈತರಿಗೆ ಪರಿಹಾರ ನೀಡಲು ಮೋದಿ ಸರ್ಕಾರ ‘ಕಿಸಾನ್ ರಥ್ ಆಪ್  ಬಿಡುಗಡೆ ಮಾಡಿದೆ. ಮಾಧ್ಯಮಗಳ ಪ್ರಕಾರ, ಕೆಲವೇ ದಿನಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ರೈತರು ಈ ಆಪ್‌ ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ‘ಕಿಸಾನ್ ರಥ್’ ಆಪ್ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಸಹಾಯ ಮಾಡುತ್ತಿದೆ.

ಈ ಅಪ್ಲಿಕೇಶನನ್ನು  ಆಂಡ್ರಾಯ್ಡ್  ಮೊಬೈಲ್ ಫೋನ್‌ ಗ್ರಾಹಕರು ಪ್ಲೇ ಸ್ಟೋರ್  ನಿಂದ ಡೌನ್‌ಲೋಡ್ ಮಾಡಬೇಕು. ಈ ಅಪ್ಲಿಕೇಶನ್ 8 ಭಾಷೆಗಳಲ್ಲಿ ಲಭ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...