alex Certify ರಾಮಮಂದಿರ ಉದ್ಘಾಟನೆ : ಸೋಮವಾರ ಶಾಲೆಗೆ ರಜೆ ಹಾಕಿದ್ರೆ 1 ಸಾವಿರ ದಂಡ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಮಮಂದಿರ ಉದ್ಘಾಟನೆ : ಸೋಮವಾರ ಶಾಲೆಗೆ ರಜೆ ಹಾಕಿದ್ರೆ 1 ಸಾವಿರ ದಂಡ..!

ಚಿಕ್ಕಮಗಳೂರು : ಜ.22 ರಂದು ಸೋಮವಾರ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಸಜ್ಜಾಗಿದೆ.

ರಾಮಮಂದಿರ ಉದ್ಘಾಟನೆ ಹಿನ್ನೆಲೆ ಹಲವು ರಾಜ್ಯಗಳಲ್ಲಿ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಇನ್ನೂ ಘೋಷಣೆಯಾಗಿಲ್ಲ. ಇದೀಗ ಚಿಕ್ಕಮಗಳೂರು ನಗರದ ಸೇಂಟ್ ಜೋಸೆಫ್ ಶಾಲೆಯಲ್ಲಿ ಮಕ್ಕಳಿಗೆ ಸೋಮವಾರ ರಜೆ ಹಾಕದಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಮಕ್ಕಳು ಯಾವುದೇ ಕಾರಣಕ್ಕೂ ಸೋಮವಾರ ರಜೆ ಹಾಕಬಾರದು, ಶಾಲೆಗೆ ರಜೆ ಹಾಕಿದ್ರೆ 1 ಸಾವಿರ ದಂಡ ಹಾಕ್ತೀವಿ ಎಂದು ಶಾಲೆ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ ಎಂದು ಹೇಳಲಾಗುತ್ತಿದೆ.

ಜ.22 ರಂದು ಮಕ್ಕಳು ಶಾಲೆ ತಪ್ಪಿಸಿಕೊಳ್ಳಬಾರದು, ಒಂದು ವೇಳೆ ಶಾಲೆಗೆ ರಜೆ ಹಾಕಿದ್ರೆ 1 ಸಾವಿರ ದಂಡ ಹಾಕುತ್ತೇವೆ ಎಂದು ಶಾಲೆಯ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎನ್ನಲಾಗಿದೆ.

 

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...