alex Certify ಕಾರ್ಮಿಕ ಭವಿಷ್ಯ ನಿಧಿ ಬಾಕಿ ವಸೂಲಾತಿ ಕ್ರಮ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ಮಿಕ ಭವಿಷ್ಯ ನಿಧಿ ಬಾಕಿ ವಸೂಲಾತಿ ಕ್ರಮ ಜಾರಿ

ಶಿವಮೊಗ್ಗ : ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ, ನವದೆಹಲಿಯು ಡಿಸೆಂಬರ್ 2023 ರಿಂದ ಫೆಬ್ರವರಿ -2024ರವರೆಗೆ ವಿಶೇಷ ವಸೂಲಾತಿ ಅಭಿಯಾನವನ್ನು ಪ್ರಾರಂಭಿಸಿದ್ದು, ಇಪಿಎಫ್ ಮತ್ತು ಎಂಪಿ ಆಕ್ಟ್ 1952ರ ಸೆಕ್ಷನ್ 8ಬಿ ಯಿಂದ 8ಜಿ ಅಡಿಯಲ್ಲಿ ಮರುಪ್ರಾಪ್ತಿ ಪ್ರಕ್ರಿಯೆಗಳು ಪಿಎಫ್ ಮತ್ತು ಅಲೈಡ್ ಬಾಕಿಗಳ ವಸೂಲಾತಿಗಾಗಿ ಪ್ರಾದೇಶಿಕ ಕಚೇರಿಯಿಂದ ಟಾಪ್ 5 ಸಂಸ್ಥೆಗಳ ವಿರುದ್ಧ ಕ್ರಮ ಜಾರಿಗೊಳಿಸಿದೆ.

ಹರಪ್ಪನಹಳ್ಳಿಯ ಮೆ|| ಕತ್ರ ಫೈಟೋಕೆಮ್ ಪ್ರೈ.ಲಿ., ಹರಿಹರದ ಮೆ|| ಸೋನಲ್ಕರ್ ಟೂಲ್ ವಕ್ರ್ಸ್ ಪ್ರೈ. ಲಿ., ಶಿವಮೊಗ್ಗದ ಬಿ. ಬಸವರಾಜ್, ಕಂಟ್ರಾಕ್ಟರ್, ಮೆ||ವೆರ್ಟೇರಾ ಡಿನ್ನರ್ವೇರ್ ಪ್ರೈ.ಲಿ., ಹಾಗೂ ಶ್ರೀ ಗುರು ರಾಘವೇಂದ್ರ ಎಂಟರ್ಪ್ರೈಸಸ್, ಸಂತೆಕಡೂರು ಈ ಸಂಸ್ಥೆಗಳ ಉದ್ಯೋಗದಾತರ/ ನಿರ್ದೇಶಕರ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಿದ್ದರೆ ಅದನ್ನು ro.shivamogga@epfindia.gov.in ನಲ್ಲಿ ಹಂಚಿಕೊಳ್ಳಬಹುದಾಗಿದೆ.

ಬಲವಂತದ ಕ್ರಮಗಳನ್ನು ತಪ್ಪಿಸಲು, ಉದ್ಯೋಗದಾತರು ಪಿಎಫ್ ವಂತಿಕೆಗಳನ್ನು ನಿಗದಿತ ಅವಧಿಯಲ್ಲಿ ಮತ್ತು ಆದೇಶ ನೀಡಿದ 60 ದಿನಗಳಲ್ಲಿ ಎಲ್ಲಾ ಪಿಎಫ್ ಸಂಬಂಧಿತ ಬಾಕಿಗಳನ್ನು ಭರಿಸಲು ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...