alex Certify ಕಂಗನಾರ ‘ಭಿಕ್ಷೆ’ ಹೇಳಿಕೆಯನ್ನು ಮುಸ್ಲಿಂ ನೀಡಿದ್ದರೆ ಗುಂಡು ಹಾರಿಸುತ್ತಿದ್ರು: ಒವೈಸಿ ಹೇಳಿಕೆಯ ಈ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಗನಾರ ‘ಭಿಕ್ಷೆ’ ಹೇಳಿಕೆಯನ್ನು ಮುಸ್ಲಿಂ ನೀಡಿದ್ದರೆ ಗುಂಡು ಹಾರಿಸುತ್ತಿದ್ರು: ಒವೈಸಿ ಹೇಳಿಕೆಯ ಈ ವಿಡಿಯೋ ವೈರಲ್

1947ರಲ್ಲಿ ದೇಶಕ್ಕೆ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ ಭಿಕ್ಷೆ ಎಂದ ಬಾಲಿವುಡ್​ ನಟಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಂಗನಾ ರಣಾವತ್​ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಕಿಡಿಕಾರಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಓವೈಸಿ, ಮೇಡಂ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಭಾರತಕ್ಕೆ 2014ರಲ್ಲಿ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳ್ತಿದ್ದಾರೆ. ಇದೇ ಮಾತನ್ನು ಯಾರಾದರೂ ಮುಸ್ಲಿಮರು ಹೇಳಿದ್ದರೆ ಕಪಾಳ ಮೋಕ್ಷ ಮಾಡಲಾಗ್ತಿತ್ತು ಮೊಣಕಾಲಿಗೆ ಗುಂಡು ಹಾರಿಸಿ ಜೈಲಿಗಟ್ಟುತ್ತಿದ್ದರು ಎಂದು ಹೇಳಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಶೇರ್​ ಆಗುತ್ತಿರುವ 24 ಸೆಕೆಂಡ್​ಗಳ ವಿಡಿಯೋದಲ್ಲಿ ಕಂಗನಾ ರಣಾವತ್​, 1947ರಲ್ಲಿ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಸ್ವಾತಂತ್ರ್ಯವಲ್ಲ. ಅದು ಭಿಕ್ಷೆ. ನಾವು ನಿಜವಾದ ಸ್ವಾತಂತ್ರ್ಯವನ್ನು 2014ರಲ್ಲಿ ಪಡೆದಿದ್ದೇವೆ ಎಂದು ಹೇಳಿದ್ದರು.

ಕಂಗನಾ ರಣಾವತ್​ರ ಈ ಮಾತಿಗೆ ಕಾಂಗ್ರೆಸ್ಸಿಗರಿಂದ ವ್ಯಾಪಕ ವಿರೋಧ ಕೇಳಿಬರುತ್ತಿದ್ದಂತೆಯೇ ಇನ್​ಸ್ಟಾಗ್ರಾಂನಲ್ಲಿ ತಮ್ಮ ವಿವಾದಾತ್ಮಕ ಹೇಳಿಕೆಗೆ ಸಮರ್ಥನೆ ನೀಡಿದ್ದರು. ಸಂದರ್ಶನದಲ್ಲಿ ನಾನು ಸ್ವಾತಂತ್ರ್ಯ ಹೋರಾಟಗಾರರಿಗೆ ಅಥವಾ ಹುತಾತ್ಮರಿಗೆ ಅಪಮಾನ ಮಾಡಿದ್ದೇ ಹೌದು ಎಂಬುದನ್ನು ಸಾಬೀತು ಪಡಿಸಿದಲ್ಲಿ ಪದ್ಮಶ್ರೀಯನ್ನು ವಾಪಸ್​ ನೀಡೋದಾಗಿ ಹೇಳಿದ್ದರು.

ಇದೇ ಮಾತನ್ನು ಮುಸ್ಲಿಮರು ಹೇಳಿದ್ದರೆ ಅವರನ್ನು ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿತ್ತು. ಆದರೆ ಆಕೆ ರಾಣಿ ನೀವು ರಾಜ. ಹೀಗಾಗಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಂಗನಾ ಹಾಗೂ ಕೇಂದ್ರ ಸರ್ಕಾರಕ್ಕೆ ಟಾಂಗ್​ ನೀಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...